ADVERTISEMENT

PV ಸಾಧಕಿಯರು | ರೆಕ್ಕೆ ಕತ್ತರಿಸಿ ಬಿದ್ದ ಪಕ್ಷಿಗಳಿಗೆ ಮರುಜೀವ ನೀಡುವ ಮಮತಾಮಯಿ

ಪ್ರಜಾವಾಣಿ ವಿಶೇಷ
Published 11 ಏಪ್ರಿಲ್ 2024, 13:10 IST
Last Updated 11 ಏಪ್ರಿಲ್ 2024, 13:10 IST

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಗೌರಿ ಶಿವಯೋಗಿ, ಸಂಕಷ್ಟಕ್ಕೆ ಸಿಲುಕಿರುವ ಪಕ್ಷಿಗಳಿಗೆ ಕಳೆದ ಎರಡು ದಶಕಗಳಿಂದ ಆಸರೆಯಾಗಿದ್ದಾರೆ. ರೆಕ್ಕೆ ಕಳೆದುಕೊಂಡು ಬಿದ್ದಿರುವ ಪಕ್ಷಿಗಳಿಗೆ ಗರಿಕಸಿ ಮಾಡುವುದಕ್ಕೆ ಸಹಾಯ ಮಾಡಿದ್ದಾರೆ. ಕೆಲವು ಪಕ್ಷಿಗಳಿಗೆ ಮರುಜೀವ ತುಂಬಿದ್ದಾರೆ. ವೈದ್ಯ ತಂಡದ ಜೊತೆಗೂಡಿ ಮಾನವೀಯ ಕೆಲಸ ಮಾಡುತ್ತಿದ್ದಾರೆ. ಇವರ ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಬೆಂಗಳೂರಿನ ಹಲವು ಬಡಾವಣೆ ಮಕ್ಕಳು ಮತ್ತು ಹಿರಿಯರೂ ಪಕ್ಷಿಗಳ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.