ಮೈಸೂರು: ಜೀಪಿನಲ್ಲಿದ್ದವರನ್ನು ಆನೆಗಳ ಹಿಂಡು ಅಟ್ಟಿಸಿಕೊಂಡು ಬರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಶನಿವಾರ ಹೆಚ್ಚಾಗಿ ಹರಿದಾಡುತ್ತಿದೆ.
ಈ ಘಟನೆ ಇಲ್ಲಿನ ನಾಗರಹೊಳೆಯ ಹುಲಿ ರಕ್ಷಿತಾರಣ್ಯದ ದಮ್ಮನಕಟ್ಟೆಯಕಬಿನಿ ಹಿನ್ನೀರಿನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಮೊದಲಿಗೆ ಆನೆಯೊಂದು ಅಟ್ಟಿಸಿಕೊಂಡು ಬರುತ್ತಿದ್ದಂತೆ ‘ಬಾ ಬಾ’ ಎಂದು ಜೀಪಿನಲ್ಲಿದ್ದವರು ಕೂಗುತ್ತಿರುವ ಧ್ವನಿ ವಿಡಿಯೊದಲ್ಲಿದೆ. ನಂತರ, ಇಡೀ ಆನೆ ಹಿಂಡೇ ರೊಚ್ಚಿಗೆದ್ದು ಬೆನ್ನಟ್ಟುತ್ತದೆ.
ಈ ಕುರಿತು ‘ಪ್ರಜಾವಾಣಿ’ ನಾಗರಹೊಳೆ ಹುಲಿ ರಕ್ಷಿತಾರಣ್ಯದ ನಿರ್ದೇಶಕ ಮಹೇಶ್ಕುಮಾರ್ ಅವರನ್ನು ಸಂಪರ್ಕಿಸಿದಾಗ, ಅವರು ಇದು ನಾಗರಹೊಳೆಯಲ್ಲಿ ನಡೆದಿರುವ ಘಟನೆ ಅಲ್ಲ ಎಂದು ತಿಳಿಸಿದರು. ‘ವಿಡಿಯೊದಲ್ಲಿರುವ ದೃಶ್ಯಾವಳಿಗಳಿಗೂ ನಾಗರಹೊಳೆಗೂ ಸಾಮ್ಯತೆ ಇಲ್ಲ. ಇದು ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.