ಬಳ್ಳಾರಿ: ಪಾಲಿಕೆ ಸದಸ್ಯೆ ಐ.ದಿವ್ಯಾಕುಮಾರಿ ಕುಟುಂಬ ಸದಸ್ಯರಿಗೆ ಜೀವಬೆದರಿಕೆ, ಬೈಕ್ ಗಳಿಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಜಾಗೃತಿ ನಗರದ ನಿವಾಸಿ ಪುರುಷೋತ್ತಮ ಅವರನ್ನು ಬುಧವಾರ ರಾತ್ರಿ ಕೌಲ್ ಬಜಾರ್ ಠಾಣೆಯ ಪೋಲಿಸರು ಉರ್ದು ತರಬೇತಿ ಶಾಲೆಯ ಬಳಿ ಬಂಧಿಸಿದ್ದಾರೆ.
27ನೇ ವಾರ್ಡ್ನ ಸದಸ್ಯೆ ವಿದ್ಯಾಕುಮಾರಿ ಅವರ ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್ಗಳಿಗೆ ದುಷ್ಕರ್ಮಿಗಳು ಬುಧವಾರ ಸಂಜೆ ಬೆಂಕಿ ಹಚ್ಚಿದ್ದರು.
ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಕೆಲವೇ ದಿನ ಇದ್ದು, ನಡೆದಿರುವ ಈ ಘಟನೆಗೆ ಕಾಂಗ್ರೆಸ್ನ ಎರಡು ಗುಂಪುಗಳ ನಡುವಿನ ರಾಜಕೀಯ ದ್ವೇಷ ಕಾರಣ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.