ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯು (ಬೆಸ್ಕಾಂ) ಬೇಗೂರಿನ 220 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ. 3ರಂದು ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿದ್ದು, ದೇವನಹಳ್ಳಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
‘ಅಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಮೀನಕುಂಟೆ ಹೊಸೂರು, ಸಾದಹಳ್ಳಿ ಗೇಟ್, ನವರತ್ನ ಅಗ್ರಹಾರ, ಸ್ವಿಸ್ ಟೌನ್, ಮುಲಿಬೆರ್ರಿ, ಗುಂಡೂ ರಾವ್ ಎಸ್ಟೇಟ್, ಬೂದಿಗೆರೆ, ನಲ್ಲೂರು, ಕಗ್ಗಲಹಳ್ಳಿ, ಗಂಗವಾರಾ, ಎಂ.ಹೊಸ ಹಳ್ಳಿ, ಮಂಚಪಹಳ್ಳಿ, ಬೆಟ್ಟಕೋಟೆ, ಹೊಸಹಳ್ಳಿ, ಸಾತನೂರ್, ವಿದ್ಯಾನಗರ ಕ್ರಾಸ್, ಬಾಗಲೂರು ಹಾಗೂ ಸುತ್ತ ಮುತ್ತ ಪ್ರದೇಶಗಳಿಗೆ ವಿದ್ಯುತ್ ಸರಬರಾ ಜಿನಲ್ಲಿ ವ್ಯತ್ಯಯ ಉಂಟಾಗಲಿದೆ’ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.