ADVERTISEMENT

ನಿವೃತ್ತ ತಹಸೀಲ್ದಾರ್‌ಗೆ ಥಳಿತ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:37 IST
Last Updated 29 ಆಗಸ್ಟ್ 2016, 19:37 IST

ಬೆಂಗಳೂರು: ನಗರದ ಕಂದಾಯ ಭವನದ ಗ್ರೇಡ್–2 ತಹಸೀಲ್ದಾರ್‌ ಕಚೇರಿಯಲ್ಲಿ ಸೋಮವಾರ ನಿವೃತ್ತ ತಹಸೀಲ್ದಾರ್‌ ವೀರೇಶ್‌ ಅವರನ್ನು ಸಾರ್ವಜನಿಕರು ಥಳಿಸಿದ್ದಾರೆ.

‘ನಿವೃತ್ತಿ ನಂತರವೂ ಕಚೇರಿಗೆ ಬರುತ್ತಿದ್ದ ವೀರೇಶ್‌ ಅವರು ಸಾರ್ವಜನಿಕರ ಕೆಲಸಗಳಿಗೆ ಅಡ್ಡಿ ಪಡಿಸುತ್ತಿದ್ದರು. ಜತೆಗೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಇದರಿಂದ ಕೋಪಗೊಂಡ ಸಾರ್ವಜನಿಕರು ವೀರೇಶ್‌ ಅವರನ್ನು ಥಳಿಸಿದ್ದಾರೆ’ ಎಂದು ಹಲಸೂರು ಗೇಟ್‌ ಪೊಲೀಸರು ತಿಳಿಸಿದರು.

‘ಸುದ್ದಿ ತಿಳಿದು ಸ್ಥಳಕ್ಕೆ ಹೋಗಿ ವೀರೇಶ್‌ ಅವರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಯಿತು. ಈ ಘಟನೆ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಈ ಬಗ್ಗೆ ಯಾರೂ ದೂರು ನೀಡಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.