ADVERTISEMENT

‘ರೈತರ ಹಿತ ಕಾಯದ ಜನಪ್ರತಿನಿಧಿಗಳು’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:40 IST
Last Updated 7 ನವೆಂಬರ್ 2017, 6:40 IST
ನರಗುಂದದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 845ನೇ ದಿನವಾದ ಸೋಮವಾರ ಹೋರಾಟ ಸಮಿತಿ ಸದಸ್ಯ ಹನಮಂತ ಸರನಾಯ್ಕರ ಮಾತನಾಡಿದರು.
ನರಗುಂದದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 845ನೇ ದಿನವಾದ ಸೋಮವಾರ ಹೋರಾಟ ಸಮಿತಿ ಸದಸ್ಯ ಹನಮಂತ ಸರನಾಯ್ಕರ ಮಾತನಾಡಿದರು.   

ನರಗುಂದ: ‘ಸ್ವಾರ್ಥ ರಾಜಕೀಯಕ್ಕೆ ರೈತರು ಬಲಿ ಪಶುಗಳಾಗುತ್ತಿದ್ದಾರೆ. ಪ್ರತಿ ವಿಷಯದಲ್ಲಿ ರೈತರನ್ನು ಮೋಸಗೊಳಿಸುವ ಕುತಂತ್ರ ನಡೆಯುತ್ತಿದೆ’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ಹನಮಂತ ಸರನಾಯ್ಕರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 845ನೇ ದಿನವಾದ ಸೋಮವಾರ ಅವರು ಮಾತನಾಡಿದರು. ‘ಜನಪ್ರತಿನಿಧಿಗಳಿಂದ ರೈತರ ಉದ್ದಾರ ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ. ಸರ್ಕಾರಕ್ಕೆ ಇನ್ನಷ್ಟು ಬಿಸಿ ಮುಟ್ಟಿಸುವಂತೆ ಹೋರಾಟ ಚುರುಕುಗೊಳಿಸಬೇಕು’ ಎಂದರು.

‘ಈ ಭಾಗದ ಶಾಸಕರು, ಸಂಸದರು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ಹೋರಾಟ ಹತ್ತಿಕ್ಕುವ ಕುತಂತ್ರ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ನಾವು ಬಗ್ಗುವುದಿಲ್ಲ’ ಎಂದು ಸಿದ್ದಪ್ಪ ಚಂದ್ರತ್ನವರ ಹೇಳಿದರು.

ADVERTISEMENT

ಎಸ್‌.ಬಿ.ಜೋಗಣ್ಣವರ, ಹನಮಂತ ಪಡೆಸೂರ, ಪುಂಡಲೀಕ ಯಾದವ, ವಾಸು ಚವ್ಹಾಣ, ಚನ್ನಪ್ಪಗೌಡ ಪಾಟೀಲ, ಯಲ್ಲಪ್ಪ ಗುಡದೇರಿ, ವಿರುಪಾಕ್ಷಿ ಪಾರಣ್ಣವರ, ಚನಬಸುಹುಲಜೋಗಿ, ಚನಬಸವ್ವ ಆಯಟ್ಟಿ,ಗಂಗಮ್ಮ ಹಡಪದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.