ADVERTISEMENT

ಟೆಂಪೊ ಅಪಘಾತ: ಸಾವು

​ಪ್ರಜಾವಾಣಿ ವಾರ್ತೆ
Published 23 ಜುಲೈ 2018, 14:38 IST
Last Updated 23 ಜುಲೈ 2018, 14:38 IST
ಹಾನಗಲ್‌ ತಾಲ್ಲೂಕಿನ ಮಾವಕೊಪ್ಪ ಬಳಿಯಲ್ಲಿ ಸೋಮವಾರ ಅಪಘಾತಕ್ಕೆ ಈಡಾದ ಟೆಂಪೊ 
ಹಾನಗಲ್‌ ತಾಲ್ಲೂಕಿನ ಮಾವಕೊಪ್ಪ ಬಳಿಯಲ್ಲಿ ಸೋಮವಾರ ಅಪಘಾತಕ್ಕೆ ಈಡಾದ ಟೆಂಪೊ    

ಹಾನಗಲ್:ತಾಲ್ಲೂಕಿನ ಮಾವಕೊಪ್ಪ ಬಳಿ ಸೋಮವಾರ ಟೈರ್‌ ಸ್ಪೋಟಗೊಂಡು ಟೆಂಪೊ ಮಗುಚಿ ಬಿದ್ದ ಪರಿಣಾಮ ತಾಲ್ಲೂಕಿನ ಕೊಂಡೋಜಿ ಗ್ರಾಮದ ಮಾಲತೇಶ ರಾಮಚಂದ್ರ ಕಲ್ಲಿಯವರ (35) ಸ್ಥಳದಲ್ಲೇ ಮೃತಪಟ್ಟಿದ್ದು, 20 ಪ್ರಯಾಣಿಕರು ಗಾಯಗೊಂಡಿದ್ದಾರೆ.

ತಾಲ್ಲೂಕಿನ ತಿಳವಳ್ಳಿಯಿಂದ ಹಾನಗಲ್‌ ಪಟ್ಟಣಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಟೆಂಪೊ ಮಗುಚಿ ಬಿದ್ದಿದೆ. ಸುಮಾರು 10 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಸರ್ಕಲ್ ಇನ್‌ಸ್ಪೆಕ್ಟರ್ ರೇವಣ್ಣ ಕಟ್ಟಿಮನಿ, ಸಬ್‌ ಇನ್‌ಸ್ಪೆಕ್ಟರ್ ಗುರುರಾಜ ಮೈಲಾರ ಹಾಗೂ ಪೊಲೀಸ್ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT