ADVERTISEMENT

ಇಂದು ಹೊಲಾರ್‌ನಲ್ಲಿ ಎಂ.ಜಿ.ಟ್ರೋಫಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 5:13 IST
Last Updated 28 ಜನವರಿ 2017, 5:13 IST
ಇಂದು ಹೊಲಾರ್‌ನಲ್ಲಿ ಎಂ.ಜಿ.ಟ್ರೋಫಿ
ಇಂದು ಹೊಲಾರ್‌ನಲ್ಲಿ ಎಂ.ಜಿ.ಟ್ರೋಫಿ   

ಉಡುಪಿ: ಕರ್ನಾಟಕ ಕಾರ್ಮಿಕರ ವೇದಿಕೆ ಹಾಗೂ ಶ್ರೀ ಮಹಾಗಣಪತಿ ಫ್ರೆಂ ಡ್ಸ್ ಹೊಲಾರ್ ಅವರ ಜಂಟಿ ಸಹಭಾ ಗಿತ್ವದಲ್ಲಿ ಎಂಡೋಸಲ್ಫಾನ್ ಮತ್ತು ಪೋಲಿಯೊ ಪೀಡಿತ ಮಕ್ಕಳ ಸಹಾಯಾ ರ್ಥವಾಗಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪ್ರೊ.ಕಬಡ್ಡಿ ಪಂದ್ಯಾಟದ ಮಾದರಿಯಲ್ಲಿ ಇಂದು ಸಂಜೆ 6.30ಕ್ಕೆ ಗೋಳೆಹೊಳೆ ಗ್ರಾಮದ ಹೊಲಾರ್ ಹಾಲ್ಕಲ್ ಹತ್ತಿರದ ಮಹಾಗಣಪತಿ ಕ್ರೀಡಾಂಗಣದಲ್ಲಿ ‘ಎಂ.ಜಿ.ಟ್ರೋಫಿ-2017’ ನಡೆಯಲಿದೆ.

ಸಚಿವ ಪ್ರಮೋದ್ ಮಧ್ವರಾಜ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.   ಸಚಿವ ಯು.ಟಿ.ಖಾದರ್  ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.  ಕ್ರೀಡಾಕೂಟದ ಅಂಗವಾಗಿ ಸಂಜೆ 5.30ಕ್ಕೆ ಮನು ಹಂದಾಡಿ ಅವರ ಹಾಸ್ಯ ಸಂಜೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ಥಳೀಯ ಕ್ರೀಡಾಪಟುಗಳು ಹಾಗೂ ಡಾ. ದೇವಿಪ್ರಸಾದ್ ಶೆಟ್ಟಿ ಅವರನ್ನು ಗೌರವಿಸ ಲಾಗುವುದು ಎಂದು ಕಾರ್ಮಿಕ ವೇದಿ ಕೆಯ ಉಡುಪಿ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.