ADVERTISEMENT

'ಕಪಿಲ್ ದೇವ್ ‘ಆಗಿ ರಣವೀರ್ ಸಿಂಗ್

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 11:30 IST
Last Updated 7 ನವೆಂಬರ್ 2017, 11:30 IST
'ಕಪಿಲ್ ದೇವ್ ‘ಆಗಿ ರಣವೀರ್ ಸಿಂಗ್
'ಕಪಿಲ್ ದೇವ್ ‘ಆಗಿ ರಣವೀರ್ ಸಿಂಗ್   

ಮುಂಬೈ: ಭಜರಂಗಿ ಭಾಯಿಜಾನ್ ಖ್ಯಾತಿಯ ನಿರ್ದೇಶಕ ಕಬೀರ್ ಖಾನ್ ತಮ್ಮ ಮುಂದಿನ ಚಿತ್ರದ ಕುರಿತು ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಹೊಸ ಚಿತ್ರದ ಕತೆಯು 1983ರಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಮೊದಲ ವಿಶ್ವಕಪ್ ಗೆದ್ದದ್ದು ಮತ್ತು ಅದಕ್ಕೆ ಕಾರಣರಾದ ನಾಯಕ ಕಪಿಲ್ ದೇವ್ ಅವರನ್ನೊಳಗೊಂಡ ತಂಡದ ಕುರಿತಾಗಿದೆ.

ಈ ಚಿತ್ರದಲ್ಲಿ ಕಪಿಲ್ ದೇವ್ ಅವರ ಪಾತ್ರವನ್ನು ರಣವೀರ್ ಸಿಂಗ್ ನಿರ್ವಹಿಸಲಿದ್ದಾರೆ. ಈ ಕುರಿತು ಮಾತನಾಡಿದ ರಣವೀರ್, ಬಾಲ್ಯದಲ್ಲಿದ್ದಾಗ 1983ರ ವಿಶ್ವಕಪ್ ನೋಡಿದ ನನಗೆ ಮುಂದೆ ಭಾರತದ ಕ್ರಿಕೆಟ್‌ ಭವಿಷ್ಯದಲ್ಲಿ ಇಷ್ಟು ದೊಡ್ಡಮಟ್ಟದ ಬದಲಾವಣೆ ಆಗುತ್ತದೆಂಬ ಊಹೆಯೂ ಇರಲಿಲ್ಲ. ಈ ರೀತಿ ಗೆಲುವು ಪಡೆದ, ಉತ್ಸಾಹ ತುಂಬಿದ ಭಾರತದ ಯುವಕರ ಪಡೆಯ ಕತೆ ನಾನು ಕೆಲಸ ಮಾಡಿರುವ ಈವರೆಗಿನ ಚಿತ್ರಗಳಲ್ಲಿ ಬಹಳ ಕುತೂಹಲಕಾರಿಯಾದದ್ದಾಗಿದೆ ಎಂದಿದ್ದಾರೆ.

ಈ ಚಿತ್ರಕ್ಕೆ ಕತೆ ಹೆಣೆಯುವಾಗ ರಣವೀರ್ ಹೊರತು ಬೇರೆ ಯಾರ ಕಲ್ಪನೆಯೂ ನನಗೆ ಬರಲಿಲ್ಲ ಎಂದಿರುವ ಕಬೀರ್ ಖಾನ್, ಚಿತ್ರವನ್ನು 2019ರ ಏಪ್ರಿಲ್‌ನಲ್ಲಿ ಬಿಡುಗಡೆಮಾಡುವ ಯೋಚನೆಯಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.