ನವದೆಹಲಿ (ಐಎಎನ್ಎಸ್): ಹರಿಯಾಣದಲ್ಲಿ 2012ರಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಮಾಡಿದ್ದ ಮೂವರು ಆರೋಪಿಗಳಿಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ಕಾಯಂಗೊಳಿಸಿದೆ.
ಮೂವರು ಆರೋಪಿಗಳು 19 ವರ್ಷದ ಯುವತಿ ಮೇಲೆ ಅತ್ಯಾ ಚಾರವೆಸಗಿ ಕೊಲೆ ಮಾಡಿದ್ದರು. ಈ ಕೃತ್ಯ ನಡೆಸಿದ್ದ 3 ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಫೆಬ್ರುವರಿಯಲ್ಲಿ ಗಲ್ಲುಶಿಕ್ಷೆ ವಿಧಿಸಿತ್ತು.
ದೆಹಲಿಯ ಕುತುಬ್ ವಿಹಾರ ಪ್ರದೇಶದಲ್ಲಿ ತನ್ನ ಸಹೋದ್ಯೋಗಿಗಳ ಜತೆ ಗುಡಗಾಂವ್ನಿಂದ ಬರುತ್ತಿದ್ದ ಯುವತಿ ಯನ್ನು ರಾಹುಲ್, ರವಿ, ವಿನೋದ್ ಎಂಬುವರು ಕಾರ್ನಲ್ಲಿ ಅಪಹರಿಸಿ ಅತ್ಯಾಚಾರವೆಸಗಿ ಕೊಲೆಗೈದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.