ನವದೆಹಲಿ: ‘ಏರ್ಸೆಲ್– ಮ್ಯಾಕ್ಸಿಸ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಜಾರಿ ನಿರ್ದೇಶನಾಲಯವು ದಯಾನಿಧಿ ಮಾರನ್ ಮತ್ತು ಕಲಾನಿಧಿ ಮಾರನ್ ಅವರಿಗೆ ಸೇರಿದ ₹ 742 ಕೋಟಿ ಆಸ್ತಿಯನ್ನು ಬುಧವಾರ ಜಪ್ತಿ ಮಾಡಿದೆ.
‘ಏರ್ಸೆಲ್’ ಕಂಪೆನಿಯನ್ನು ಮಲೇಷ್ಯಾ ಮೂಲದ ‘ಮ್ಯಾಕ್ಸಿಸ್’ಗೆ ಮಾರಾಟ ಮಾಡುವಂತೆ ಏರ್ಸೆಲ್ ಮಾಲೀಕ ಶಿವಶಂಕರನ್ ಮೇಲೆ ಒತ್ತಡ ಹೇರಲು ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್ ಹಾಗೂ ಅವರ ಸೋದರ ಸನ್ ಸಮೂಹದ ಮುಖ್ಯಸ್ಥ ಕಲಾನಿಧಿ ಮಾರನ್ ಅವರು ₹ 742 ಕೋಟಿ ಮೊತ್ತವನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ಸಿಬಿಐ ಈ ಹಿಂದೆ ಆರೋಪಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.