ADVERTISEMENT

ಮೀನುಗಾರರಿಗೆ ವಿನಾಯ್ತಿ ಭರವಸೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2014, 19:30 IST
Last Updated 3 ನವೆಂಬರ್ 2014, 19:30 IST

ನವದೆಹಲಿ: ‘ಕರಾವಳಿ ನಿರ್ಬಂಧಿತ ವಲಯ’ (ಸಿಆರ್‌ಜೆಡ್) ವ್ಯಾಪ್ತಿಯಿಂದ ಮೀನು­ಗಾರರಿಗೆ ವಿನಾಯ್ತಿ ನೀಡುವ ಕುರಿತು ಪರಿಶೀಲಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ ಭರವಸೆ ನೀಡಿದೆ.

ಮೀನುಗಾರರನ್ನು ಕರಾವಳಿ ನಿರ್ಬಂಧಿತ ವಲಯದಿಂದ ಹೊರ ಹಾಕಬಾರದೆಂಬ ಬೇಡಿಕೆ ತಮ್ಮ ಗಮನಕ್ಕೂ ಬಂದಿದೆ. ಸಣ್ಣಪುಟ್ಟ ಮೀನುಗಾರರ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪರಿಸರ ಇಲಾಖೆ ಸಚಿವ ಪ್ರಕಾಶ ಜಾವಡೇಕರ್‌ ರಾಜ್ಯದ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಆಶ್ವಾಸನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.