ADVERTISEMENT

ಕಟ್ಟಡ ಕೆಡಹುವ ವೇಳೆ ದುರಂತ: ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 7:33 IST
Last Updated 20 ಜುಲೈ 2017, 7:33 IST
ಕಟ್ಟಡ ಕೆಡಹುವ ವೇಳೆ ದುರಂತ: ಕಾರ್ಮಿಕ ಸಾವು
ಕಟ್ಟಡ ಕೆಡಹುವ ವೇಳೆ ದುರಂತ: ಕಾರ್ಮಿಕ ಸಾವು   

ಬಳ್ಳಾರಿ: ಹಳೇ ಕಟ್ಟಡವನ್ನು ಕೆಡಹುವ ಸಂದರ್ಭ ಸಜ್ಜೆ ಕುಸಿದು ಕಾರ್ಮಿಕರೊಬ್ಬರು ಮೃತ ಪಟ್ಟು ಇನ್ನೊಬ್ಬರು ಗಾಯಗೊಂಡ ಘಟನೆ ನಗರದ ಗ್ರಹಾಂ ರಸ್ತೆಯಲ್ಲಿ ನಡೆದಿದೆ.

ಗುರುವಾರ ಬೆಳಿಗ್ಗೆ 11ರ ವೇಳೆಗೆ ದುರಂತ ಸಂಭವಿಸಿದ್ದು, ಚಿತ್ರದುರ್ಗ ಜಿಲ್ಲೆಯ ಗೌರಸಮುದ್ರ ಗ್ರಾಮದ ಪರಮೇಶ(35) ಮೃತ ದುರ್ದೈವಿ.

ಇಲ್ಲಿನ ಸುಂಕಲಮ್ಮ ದೇಗುಲದ ಮುಂಭಾಗದಲ್ಲಿದ್ದ ಕಟ್ಟಡದಲ್ಲಿ ಹಲವು ಕಿರಾಣಿ ಅಂಗಡಿಗಳಿದ್ದವು. ಜಾಯ್ ಐಸ್ ಕ್ರೀಂ, ಭಾರತ್ ಬಿಸ್ಕೆಟ್ ಗೋದಾಮಾಗಿದ್ದ ಈ ಕಟ್ಟಡ ಕೆಡಹುವ ಕಾರ್ಯ ಕಳೆದ 15 ದಿನದಿಂದ ನಡೆಯುತ್ತಿತ್ತು.

ADVERTISEMENT

ಅಗ್ನಿಶಾಮಕ ದಳ, 108 ತುರ್ತು ವಾಹನ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.