ADVERTISEMENT

ಗೃಹರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2016, 19:30 IST
Last Updated 13 ಫೆಬ್ರುವರಿ 2016, 19:30 IST

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಡೋಣವಾಡ ಗ್ರಾಮದಲ್ಲಿ ಶನಿವಾರ ಚುನಾವಣೆಗೆ ಭದ್ರತಾ ಕಾರ್ಯಕ್ಕೆ ನಿಯೋಜನೆಯಾಗಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ ಪೊಲೀಸ್‌ ಜೀಪಿನ ಚಾಲಕನ ಮೇಲೆ ಗುಂಪೊಂದು ಹಲ್ಲೆ ನಡೆಸಿರುವುದು ವರದಿಯಾಗಿದೆ.

ಗೃಹರಕ್ಷಕ ದಳದ ಸಿಬ್ಬಂದಿ ಶಿವಾನಂದ ರೂಗಿ ಹಾಗೂ  ಪೊಲೀಸ್‌ ಇಲಾಖೆ ನಿಯೋಜನೆ ಮಾಡಿದ್ದ ಖಾಸಗಿ ಜೀಪಿನ ಚಾಲಕ ಶಿವಲಿಂಗ ಮೇತ್ರಿ ಅವರ ಮೇಲೆ 20 ಜನರ ಗುಂಪು ಹಲ್ಲೆ ಮಾಡಿದೆ. ಗ್ರಾಮದ ಮತಗಟ್ಟೆ ಬಳಿ ಮತದಾರರಿಗೆ ಹಣ ನೀಡಿ ಆಮಿಷ ಒಡ್ಡಲಾಗುತ್ತಿತ್ತು. ಇದನ್ನು ಪ್ರಶ್ನಿಸಿದ ಇವರಿಬ್ಬರೊಂದಿಗೆ ವಾಗ್ವಾದ ನಡೆಸಿ, ತಳ್ಳಿ, ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.