ADVERTISEMENT

ರಾಜ್ಯಸಭಾ ಚುನಾವಣೆ ಮತದಾನ‌‌‌ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 10:58 IST
Last Updated 23 ಮಾರ್ಚ್ 2018, 10:58 IST
ರಾಜ್ಯಸಭಾ ಚುನಾವಣೆ ಮತದಾನ‌‌‌ ಮುಕ್ತಾಯ
ರಾಜ್ಯಸಭಾ ಚುನಾವಣೆ ಮತದಾನ‌‌‌ ಮುಕ್ತಾಯ   

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆ ಇದೀಗ ಮುಕ್ತಾಯಗೊಂಡಿದೆ. 

224 ಸದಸ್ಯರ ಪೈಕಿ ನಿಧನ ಹಾಗೂ ರಾಜೀನಾಮೆಯಿಂದ ಖಾಲಿಯಾಗಿದ್ದ 7 ಸ್ಥಾನಗಳನ್ನು ಬಿಟ್ಟು ಉಳಿದಂತೆ 217 ಮತದಾರರು ಹಾಜರಿದ್ದರು.  

ಈ ಪೈಕಿ ಅನಾರೋಗ್ಯ ಕಾರಣದಿಂದ ಬೇಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ರುದ್ರೇಶಗೌಡ ಮತ ಹಾಕಲಿಲ್ಲ. 

ADVERTISEMENT

ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಹಾಗೂ ಸಾ.ರಾ.ಮಹೇಶ ಅವರನ್ನು ಬಿಟ್ಟು ಉಳಿದ 28 ಶಾಸಕರು ಮತದಾನ ಬಹಿಷ್ಕರಿಸಿದರು. ಹೀಗಾಗಿ 217 ಮತಗಳ ಪೈಕಿ 188 ಮತಗಳು ಮಾತ್ರ ಚಲಾವಣೆಯಾದಂತಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.