ಬೆಂಗಳೂರು: ವಿ. ಶಶಿಕಲಾ ಭೇಟಿ ಮಾಡಲು ಗುರುವಾರ ಕಾರಾಗೃಹಕ್ಕೆ ಬಂದಿದ್ದ ಸಂಬಂಧಿ ದಿನಕರನ್ ಹಾಗೂ ಬೆಂಬಲಿಗರು, ವಿಶೇಷ ಪ್ರವೇಶ ಸಿಗದೇ ವಾಪಸ್ ಹೋದರು.
ಮಧ್ಯಾಹ್ನ ಕಾರಾಗೃಹಕ್ಕೆ ಬಂದಿದ್ದ ದಿನಕರನ್ ವಿಶೇಷ ಪ್ರವೇಶ ನೀಡಿ ಭೇಟಿಗೆ ಅನುಕೂಲ ಮಾಡಿಕೊಡುವಂತೆ ಕಾರಾಗೃಹದ ಸಿಬ್ಬಂದಿಯನ್ನು ಕೋರಿದ್ದರು.
ಅದೇ ವೇಳೆ ಇತರೆ ಕೈದಿಗಳನ್ನು ನೋಡಲು ಬಂದಿದ್ದ ಸಂಬಂಧಿಕರು, ‘ಸರದಿ ಪ್ರಕಾರವೇ ಭೇಟಿಗೆ ಅವಕಾಶ ನೀಡಬೇಕು. ದಿನಕರನ್ ಅವರಿಗೆ ವಿಶೇಷ ಪ್ರವೇಶ ನೀಡಿದರೆ, ನಮಗೂ ಆ ಸೌಲಭ್ಯ ನೀಡಿ’ ಎಂದು ಪಟ್ಟು ಹಿಡಿದರು.
ಈ ವೇಳೆ ದಿನಕರನ್ ಹಾಗೂ ಕೈದಿಗಳ ಸಂಬಂಧಿಕರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಪರಿಸ್ಥಿತಿ ತಿಳಿಗೊಳಿಸಿದ ಜೈಲು ಸಿಬ್ಬಂದಿ, ಟೋಕನ್ ಪಡೆದು ಶಶಿಕಲಾರನ್ನು ಭೇಟಿ ಮಾಡುವಂತೆ ದಿನಕರನ್ಗೆ ಹೇಳಿದರು.
ಅದರಿಂದಾಗಿ ದಿನಕರನ್, ಜೈಲಿನ ಒಳಗೆ ಹೋಗದೇ ಬೆಂಬಲಿಗರೊಂದಿಗೆ ವಾಪಸ್ ಹೊರಟು ಹೋದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.