ADVERTISEMENT

ಅನುಕೂಲ ಮಾಡಲಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 19:30 IST
Last Updated 16 ಏಪ್ರಿಲ್ 2017, 19:30 IST

ಯಶವಂತಪುರ– ಹಾಸನ ರೈಲು ಕುಣಿಗಲ್‌ ಮಾರ್ಗವಾಗಿ ಸಂಚಾರ ಆರಂಭಿಸಿರುವುದು  ಸಂತಸದ ಸುದ್ದಿ. ಈ ರೈಲನ್ನು ಯಶವಂತಪುರದಿಂದ ಹಾಸನಕ್ಕೆ ಬೆಳಿಗ್ಗೆ ಏಳು ಗಂಟೆಗೆ  ಕುಣಿಗಲ್‌ ಮಾರ್ಗವಾಗಿ ಓಡಿಸುವುದು ಸೂಕ್ತ. ಇದರಿಂದ ಈ ಮಾರ್ಗದಲ್ಲಿ ಬರುವ ಯಡಿಯೂರು ಸಿದ್ಧಲಿಂಗೇಶ್ವರ, ಬೆಳ್ಳೂರು ಕ್ರಾಸ್‌ನಲ್ಲಿರುವ ಆದಿಚುಂಚನಗಿರಿ ಕ್ಷೇತ್ರ,  ಶ್ರವಣಬೆಳಗೊಳ, ಚನ್ನರಾಯಪಟ್ಟಣ ನಿಲ್ದಾಣ ತಲುಪಲು ಹೆಚ್ಚು ಅನುಕೂಲ.

ಹೆದ್ದಾರಿಯ ಮೇಲೆ ಒತ್ತಡ ತಪ್ಪಿಸಿ ಈ ರೈಲು ಮಾರ್ಗವನ್ನು ಸದುಪಯೋಗಪಡಿಸಿಕೊಂಡರೆ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರು, ಉಡುಪಿ, ಕೊಲ್ಲೂರು, ಕುಂದಾಪುರ, ಕಾರವಾರ ತಲುಪಲು ಈ ಮಾರ್ಗ ಸಹಕಾರಿ.

ಅರಸೀಕೆರೆ ಮಾರ್ಗವಾಗಿ ಚಲಿಸುತ್ತಿರುವ ಬೆಂಗಳೂರು– ಮಂಗಳೂರು ರೈಲು ಗಾಡಿಯನ್ನು ಈ ಮಾರ್ಗದಲ್ಲಿ ಓಡಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿದರೆ ಇಂಧನ ಹಾಗೂ ಜನಸಾಮಾನ್ಯರಿಗೆ ಸಮಯ ಉಳಿತಾಯ ಆಗುತ್ತದೆ.
-ಆರ್‌. ಶಂಕರ್‌ಮಣಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.