ADVERTISEMENT

ಕಲಾಪ: ಆಸಕ್ತಿಯೇ ಇಲ್ಲ!

ಪೃಥ್ವಿರಾಜ್ ಎಂ ಎಚ್
Published 15 ನವೆಂಬರ್ 2017, 4:13 IST
Last Updated 15 ನವೆಂಬರ್ 2017, 4:13 IST

ನಮ್ಮ ಶಾಸಕರಿಗೆ ಶಾಸನಸಭೆಯ ಕಲಾಪದ ಬಗ್ಗೆ ಆಸಕ್ತಿಯೇ ಇದ್ದಂತಿಲ್ಲ. ಸದನಕ್ಕೆ ಹಾಜರಾಗುವುದನ್ನು ವ್ಯರ್ಥ ಎಂದು ಅವರು ಭಾವಿಸಿದಂತಿದೆ. ಇಲ್ಲವಾದಲ್ಲಿ, ಬೆಳಗಾವಿಯಲ್ಲಿ ನಡೆದಿರುವ ವಿಧಾನಮಂಡಲದ ಅಧಿವೇಶನದ ಮೊದಲ ದಿನವೇ ಕೋರಂ ಅಭಾವ ಎದುರಾಗುತ್ತಿರಲಿಲ್ಲ.

ಶಾಸನ ರೂಪಿಸುವುದು ನಮ್ಮ ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಆದರೆ ಎಷ್ಟೋ ಮಸೂದೆಗಳು ಚರ್ಚೆಯೇ ಇಲ್ಲದೆ ಅಂಗೀಕಾರ ಪಡೆಯುತ್ತವೆ. ಸದನದ ಚರ್ಚೆಯ ಗುಣಮಟ್ಟವಂತೂ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಲೇ ಇದೆ.  ರಾಜಕೀಯ ಪಕ್ಷಗಳು ಈ ಪೃವೃತ್ತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ತಮ್ಮ ಪಕ್ಷದ ಸದಸ್ಯರಿಗೆ ಬುದ್ಧಿ ಹೇಳಬೇಕು. ಇಲ್ಲವಾದಲ್ಲಿ ಅಧಿವೇಶನ ಎಂಬುದು ಹೆಸರಿಗೆ ಮಾತ್ರ ನಡೆಯುವ ವಿಧಿ ಎಂಬಂತಾಗುತ್ತದೆ. ಪ್ರಜಾಪ್ರಭುತ್ವ ಅರ್ಥ ಕಳೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT