ನಿಯಮ ಸಡಿಲಿಸಿ ಸಚಿವ ಅಂಬರೀಷ್ ಚಿಕಿತ್ಸೆಗೆ ₨ 1.16 ಕೋಟಿ ನೀಡಲು ಮುಖ್ಯಮಂತ್ರಿ ಒಪ್ಪಿದ್ದಾರೆ (ಪ್ರ.ವಾ. ಜುಲೈ 16). ಜನಸಾಮಾನ್ಯರು ಇಂದೂ ಒಂದು ಹೊತ್ತಿನ ತುತ್ತಿಗೆ, ಮಾನ ಮುಚ್ಚುವ ಬಟ್ಟೆಗೆ, ನೆಮ್ಮದಿಯ ಗೂಡಿಗಾಗಿ ಪರಿತಪಿಸುತ್ತಿದ್ದಾರೆ. ಹೀಗಿರುವಾಗ ಜನತೆಯ ತೆರಿಗೆ ಹಣವನ್ನು ಹೀಗೂ ವೆಚ್ಚ ಮಾಡಬಹುದೆ?
ಅಂಬರೀಷ್ ಬೆಂಗಳೂರು, ಮೈಸೂರು, ಮಂಡ್ಯಗಳಲ್ಲಿ ಸರ್ಕಾರದಿಂದ ಅಕ್ರಮವಾಗಿ ನಿವೇಶನ ಪಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿತ್ತು! ಇದರ ಸರಿ–ತಪ್ಪು ವಿವೇಚನೆ ನಡೆಸುವುದು ಹೇಗೆ?!
–ನಾಗಾರ್ಜುನ ಸಾಗ್ಗೆರೆ, ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.