ADVERTISEMENT

ಸ್ವಬುದ್ಧಿ ಸುಖಃ ಚೈವ, ಪರಬುದ್ಧಿ ವಿನಾಶಕ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 19:30 IST
Last Updated 11 ಸೆಪ್ಟೆಂಬರ್ 2017, 19:30 IST
ಸ್ವಬುದ್ಧಿ ಸುಖಃ ಚೈವ, ಪರಬುದ್ಧಿ ವಿನಾಶಕ
ಸ್ವಬುದ್ಧಿ ಸುಖಃ ಚೈವ, ಪರಬುದ್ಧಿ ವಿನಾಶಕ   

‘ಸ್ವಬುದ್ಧಿ ಸುಖಃ ಚೈವ, ಪರಬುದ್ಧಿ ವಿನಾಶಕ’ ಎಂಬ ಮಾತು ಕಾಂಗ್ರೆಸ್‍ ಉಪಾಧ್ಯಕ್ಷ (ಮುಂದೆ ಅಧ್ಯಕ್ಷರಾಗುವವರು) ರಾಹುಲ್ ಗಾಂಧಿಯವರಿಗೆ ಅನ್ವಯಿಸುವಂತಿದೆ. ಇತ್ತೀಚೆಗೆ ಅವರು ಕೊಡುತ್ತಿರುವ ಹೇಳಿಕೆಗಳು ಹಾಗಿವೆ.

ದೇಶದಲ್ಲಿ ಒಂದು ಹತ್ಯೆಯಾಗಲಿ, ಒಂದು ಚಳವಳಿಯಾಗಲಿ, ಪ್ರಕೃತಿ ವಿಕೋಪವಾಗಲಿ, ವೈದ್ಯರ ನಿರ್ಲಕ್ಷ್ಯವಾಗಲಿ, ರಾಜಕೀಯ ಬದಲಾವಣೆಯಾಗಲಿ... ಎಲ್ಲಕ್ಕೂ ಅವರು ದೂಷಿಸುವುದು ಆರ್‌ಎಸ್‌ಎಸ್‌ ಅಥವಾ ಬಿಜೆಪಿಯನ್ನು (ಅನಿಷ್ಟಕ್ಕೆಲ್ಲಾ ಶನಿದೇವ ಎನ್ನುವಂತೆ). ರಾಹುಲ್‌ಗೆ ಚರಿತ್ರೆಯ ಹೆಚ್ಚಿನ ಜ್ಞಾನ ಇಲ್ಲದಿರಬಹುದು ಅಥವಾ ಅವರಿಗೆ ಉಪದೇಶಿಸುವವರಲ್ಲೂ ಅಧ್ಯಯನದ ಕೊರತೆ ಇರಬಹುದು. ಒಟ್ಟಿನಲ್ಲಿ ರಾಹುಲ್ ಗಾಂಧಿ ತಮ್ಮ ಹೇಳಿಕೆಗಳ ಮೂಲಕ ಆರ್‌ಎಸ್‌ಎಸ್‌ ಮತ್ತು ಬಿಜೆಪಿಗೆ ಪರೋಕ್ಷವಾಗಿ ಲಾಭ ಮಾಡುತ್ತಿರುವಂತೆ ಭಾಸವಾಗುತ್ತದೆ.

–ಮೈಸೂರು ಶೇಷಾದ್ರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.