ಮಂಗಳೂರು: ನಗರದ ಬಳ್ಳಾಲ್ಬಾಗ್ನ ಬಿರುವೆರ್ ಕುಡ್ಲ ಗ್ರೌಂಡ್ನ ಬಾವಿಗೆ ಬಿದ್ದ ನಾಯಿಯನ್ನು ಧೀರ ಮಹಿಳೆಯೊಬ್ಬರು ರಕ್ಷಿಸಿದ ಘಟನೆ ಗುರುವಾರ ನಡೆದಿದೆ.
ನಗರದ ಬಳ್ಳಾಲ್ಬಾಗ್ನಲ್ಲಿ ಮಹಿಳೆಯೇ ನಾಯಿಯ ರಕ್ಷಣೆಗೆ ಮುಂದಾಗಿದ್ದು ಅವರ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಬಿರುವೆರ್ ಕುಡ್ಲ ಗ್ರೌಂಡ್ನ ಬಾವಿಗೆ ಬಿದ್ದ ನಾಯಿಯನ್ನು ರಜನಿ ಶೆಟ್ಟಿ ಬಳ್ಳಾಲ್ಬಾಗ್ ಎಂಬುವವರು ರಕ್ಷಿಸಿದ್ದಾರೆ.
ಬಾವಿಗೆ ಬಿದ್ದಿರುವ ನಾಯಿಯನ್ನು ನೋಡಿದ ರಜನಿ ಶೆಟ್ಟಿ ಅವರು ಸ್ಥಳೀಯರ ನೆರವಿನಿಂದ ಹಗ್ಗದ ಮೂಲಕ ಸ್ವತಃ ತಾವೇ ಬಾವಿಗೆ ಇಳಿದು ನಾಯಿಯನ್ನು ಸುರಕ್ಷಿತವಾಗಿ ಕಾಪಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.