ADVERTISEMENT

ಕರ್ಫ್ಯೂ ಉಲ್ಲಂಘನೆ: 5 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 5:05 IST
Last Updated 25 ಏಪ್ರಿಲ್ 2021, 5:05 IST

ದಾವಣಗೆರೆ: ಕೋವಿಡ್‌ ಕರ್ಫ್ಯೂ ನಿಯಮ ಉಲ್ಲಂಘನೆ ಸಂಬಂಧ ಜಿಲ್ಲೆಯಲ್ಲಿ ಶನಿವಾರ 5 ಪ್ರಕರಣಗಳನ್ನು ದಾಖಲಿಸಲಾಗಿದೆ.

ಕರ್ಫ್ಯೂ ವೇಳೆ ಹೋಟೆಲ್‌ಗಳನ್ನು ತೆರೆದ ಆರೋಪದ ಮೇರೆಗೆ ವಿಜಯನಗರದ ತೇಜಸ್ವಿನಿ ಟಿಫಿನ್ ಸೆಂಟರ್ ಮಾಲೀಕ ಕೆ.ಪಿ. ವಿನಾಯಕ, ಬಸಾಪುರ ಕ್ಯಾಂಪ್ ಎದುರಿನ ಸಿದ್ದೇಶ್ವರ ಬೆಣ್ಣೆದೋಸೆ ಹೋಟೆಲ್ ಮಾಲೀಕ ಮಹಾಂತೇಶ್, ಬಂಬೂ ಬಜಾರ್‌ನ ಬಸವೇಶ್ವರ ಹೋಟೆಲ್‌ ಮಾಲೀಕ ಬಸವರಾಜ ಹಾಗೂಕೋಳಿ ಮಾಂಸದ ಅಂಗಡಿ ತೆರೆದಿದ್ದ ನರಸರಾಜಪೇಟೆಯ ಸಾದಿಕ್ಅವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿಗಳನ್ನು ಗುಂಪುಗೂಡಿಸಿಕೊಂಡು ಹಣವನ್ನು ಹಿಂತಿರುಗಿಸುತ್ತಿದ್ದ ವೇಳೆ ಕಾಲೇಜೊಂದರ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ದಾವಣಗೆರೆ ನಗರದಲ್ಲಿ ಮಾಸ್ಕ್ ಧರಿಸದವರ ವಿರುದ್ಧ 64 ಪ್ರಕರಣ ದಾಖಲಿಸಿ ₹16 ಸಾವಿರ ಹಾಗೂ ಜಿಲ್ಲೆಯಲ್ಲಿ 186 ಪ್ರಕರಣ ದಾಖಲಿಸಿ ₹18,600 ದಂಡ ವಸೂಲಿ ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.