ತೋವಿನಕೆರೆ: ರೈತರಿಂದ ತುಂಬಿರುತ್ತಿದ್ದ ರೈತ ಸಂಪರ್ಕ ಕೇಂದ್ರ ಭಾನುವಾರ ವಿದ್ಯಾರ್ಥಿಗಳಿಂದ ತುಂಬಿತ್ತು. ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಿಂದ ನೇರವಾಗಿ ಪ್ರಸಾರ ಮಾಡಿದ್ದ ರೈತ ವಿದ್ಯಾನಿಧಿ ಯೋಜನೆಯ ಲೋಕಾರ್ಪಣೆ ವೀಕ್ಷಿಸಲು ಆಗಮಿಸಿದ್ದರು.
ಕೆಲವು ವಿದ್ಯಾರ್ಥಿಗಳು ಸ್ವಲ್ಪ ಸಮಯ ಕುಳಿತು ವೀಕ್ಷಿಸಿದರು. ಹೆಚ್ಚಿನವರು ಬಂದು ಹೋಗುವ ಕೆಲಸ ಮಾಡಿದರು. ಮತ್ತೆ ಕೆಲವರು ಕೇಂದ್ರ ಸಚಿವರ ಹಿಂದಿ ಭಾಷಣ ಪ್ರಾರಂಭವಾದ ಕೂಡಲೇ ಅರ್ಥವಾಗದೆ ಜಾಗ ಖಾಲಿ ಮಾಡಿದರು. ಇಲಾಖೆಯವರು ಮನವಿ ಮಾಡಿದರೂ ಅರ್ಥವಾಗುವುದಿಲ್ಲ ಎಂದು ಕಾರಣ ಹೇಳಿದರು.
ಕೃಷಿ ಅಧಿಕಾರಿ ನರಸಿಂಹಮೂರ್ತಿ, ಅಭಿಲಾಷ ಮತ್ತು ಹನುಮಂತರಾಯಪ್ಪ ವ್ಯವಸ್ಥಿತವಾಗಿ ಕಾರ್ಯಕ್ರಮ ಏರ್ಪಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.