ADVERTISEMENT

ಮಧುಗಿರಿ: ಮಕ್ಕಳಿಗೆ ಗುಲಾಬಿ ನೀಡಿದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 5:06 IST
Last Updated 7 ಸೆಪ್ಟೆಂಬರ್ 2021, 5:06 IST
ಮಧುಗಿರಿ ತಾಲ್ಲೂಕು ರಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮುಖ್ಯಶಿಕ್ಷಕ ನರಸಿಂಹರಾಜು, ಶಿಕ್ಷಕರಾದ ಎಸ್.ಎನ್. ಮಂಜುಳಾ ಹಾಗೂ ಸುಶೀಲಮ್ಮ ಗುಲಾಬಿ ಹೂ ನೀಡಿ ಬರಮಾಡಿಕೊಂಡರು
ಮಧುಗಿರಿ ತಾಲ್ಲೂಕು ರಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮುಖ್ಯಶಿಕ್ಷಕ ನರಸಿಂಹರಾಜು, ಶಿಕ್ಷಕರಾದ ಎಸ್.ಎನ್. ಮಂಜುಳಾ ಹಾಗೂ ಸುಶೀಲಮ್ಮ ಗುಲಾಬಿ ಹೂ ನೀಡಿ ಬರಮಾಡಿಕೊಂಡರು   

ಮಧುಗಿರಿ: ಕೊರೊನೊ ಭಯ ಬಿಟ್ಟು ಶಾಲೆಗೆ ಬಂದ ಮಕ್ಕಳಿಗೆ ಗುಲಾಬಿ ಹೂಗಳನ್ನು ನೀಡಿ ಶಿಕ್ಷಕರು ಆತ್ಮೀಯವಾಗಿ ಬರ
ಮಾಡಿಕೊಂಡರು.

ಕಳೆದ ಎರಡು ವರ್ಷಗಳಿಂದ ಕೊರೊನಾ ಆರ್ಭಟಕ್ಕೆ ಸರಿಯಾಗಿ ಶಾಲೆಗಳು ನಡೆಯದೇ ಮಕ್ಕಳು ಮನೆಯಲ್ಲಿಯೇ ಇದ್ದು ಆನ್‌ಲೈನ್ ತರಗತಿ ಮೂಲಕ ಪಾಠ ಕಲಿಯುತ್ತಿದ್ದರು. ಸೋಮವಾರ 6, 7 ಮತ್ತು 8ನೇ ತರಗತಿ ಪ್ರಾರಂಭವಾದ್ದರಿಂದ ಶಾಲೆಯ ಕೊಠಡಿ ಹಾಗೂ ಆವರಣವನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್‌ ಮಾಡಿಸಿದ್ದರು. ಗ್ರಾಮದ ಯುವಕ, ಯುವತಿಯರು ಶಾಲೆಯ ಆವರಣದಲ್ಲಿ ರಂಗೋಲಿ ಮತ್ತು ಹಸಿರು ತೋರಣಗಳಿಂದ ಅಲಂಕಾರ ಮಾಡಿದ್ದರು.

ಮಕ್ಕಳು ಸ್ನೇಹಿತರೊಂದಿಗೆ ಹೆಜ್ಜೆ ಹಾಕುತ್ತಾ ನಗುಮುಖದಿಂದ ಶಾಲೆಯ ಆವರಣದಲ್ಲಿ ಸರದಿ ಸಾಲಿನಲ್ಲಿ ನಿಂತು ಶಿಕ್ಷಕರು ನೀಡುತ್ತಿದ್ದ ಗುಲಾಬಿ ಹೂ ಪಡೆದುಕೊಂಡು ಶಿಕ್ಷಕರಿಗೆ ನಮಸ್ಕಾರ ಹೇಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ADVERTISEMENT

ಶಾಲೆಗೆ ಬಂದ ಮಕ್ಕಳ ಮುಖದಲ್ಲಿ ಮುಖಗವಸು ಹಾಗೂ ಅಂತರ ಕಾಯ್ದುಕೊಂಡು ಪಾಠ ಕೇಳಿದರು. ಸ್ನೇಹಿತರ ಜೊತೆ ಬೆರೆತು ಕೊರೊನಾ ಸೋಂಕಿನ ತಡೆ ಬಗ್ಗೆ ಜಾಗೃತಿ ಮೂಡಿಸಿದರು. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೊದಲ ದಿನವೇ ಶೇ 60ರಷ್ಟು ಮಕ್ಕಳು ಶಾಲೆಗೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.