ADVERTISEMENT

50 ವರ್ಷಗಳ ಹಿಂದೆ: ಮಣಿಪುರ ಸಂಪುಟದ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 20:34 IST
Last Updated 26 ಮಾರ್ಚ್ 2023, 20:34 IST
   

ಮಣಿಪುರ ಸಂಪುಟದ ರಾಜೀನಾಮೆ ವಿಧಾನಸಭೆ ಅಧಿವೇಶನ ಮುಂದಕ್ಕೆ

ಇಂಫಾಲ್, ಮಾರ್ಚ್‌ 26– ಮಣಿಪುರದ ಮುಖ್ಯಮಂತ್ರಿ ಶ್ರೀ ಮಹಮದ್‌ ಅಲಿಮುದ್ದೀನ್‌ ಅವರು ಇಂದು ತಮ್ಮ ಸಚಿವ ಸಂಪುಟದ ರಾಜೀನಾಮೆಯನ್ನು ರಾಜ್ಯಪಾಲ ಶ್ರೀ ಬಿ.ಕೆ. ನೆಹರೂ ಅವರಿಗೆ ಸಲ್ಲಿಸಿದರು.

ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದರು. ಬೇರೆ ವ್ಯವಸ್ಥೆ ಮಾಡುವ ತನಕ ಅಧಿಕಾರದಲ್ಲಿ ಮುಂದುವರೆಯು
ವಂತೆಯೂ ಶ್ರೀ ಮಹಮದ್‌ ಅಲಿಮುದ್ದೀನ್‌ ಅವರಿಗೆ ರಾಜ್ಯಪಾಲರು ಹೇಳಿದರು.

ADVERTISEMENT

ವಿಧಾನಸಭಾಧ್ಯಕ್ಷ ಡಾ. ಎಲ್‌.ಚಂದ್ರಮಣಿ ಸಿಂಗ್‌ ಅವರು ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ ಸಂಗತಿಯನ್ನು ವಿಧಾನಸಭೆಗೆ ಮಧ್ಯಾಹ್ನ ತಿಳಿಸಿದರು. ಅಲ್ಲದೆ ವಿಧಾನಸಭೆಯ ಅಧಿವೇಶನವನ್ನು ಅನಿರ್ದಿಷ್ಟ
ಕಾಲ ಮುಂದಕ್ಕೆ ಹಾಕಿದರು.

ಈ ವರ್ಷದಲ್ಲಿ ವಾರಾಹಿ ಯೋಜನೆಯ ಆರಂಭ

ಬೆಂಗಳೂರು, ಮಾರ್ಚ್‌ 26– ವಾರಾಹಿ ಜಲವಿದ್ಯುತ್‌ ಯೋಜನೆಯನ್ನು ಈ ವರ್ಷದಲ್ಲಿ ಕೈಗೊಂಡು 1979ರ ವೇಳೆಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಶ್ರೀ ಎಚ್‌.ಎಂ.
ಚನ್ನಬಸಪ್ಪ ವಿಧಾನಸಭೆಯಲ್ಲಿ ತಿಳಿಸಿದರು.

ಶ್ರೀ ಯು.ಟಿ.ಫರೀದ್‌ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಅದರಿಂದ ಉತ್ಪಾದನೆಯಾಗಬಹುದಾದ ವಿದ್ಯುತ್‌ ಪ್ರಮಾಣ ವರ್ಷವೊಂದಕ್ಕೆ 1,180 ದಶಲಕ್ಷ ಕಿಲೊವಾಟ್‌, ಆದಾಯ ಐದು ಕೋಟಿ ರೂಪಾಯಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.