ADVERTISEMENT

50 ವರ್ಷಗಳ ಹಿಂದೆ: ಮೈಸೂರು–ಮಹಾರಾಷ್ಟ್ರ ಗಡಿ ವಿವಾದ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 19:30 IST
Last Updated 23 ನವೆಂಬರ್ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕೆ ಕಾಲ ನಿಗದಿ ಅಸಾಧ್ಯ: ಪಂತ್‌

ನವದೆಹಲಿ, ನ. 23– ಮೈಸೂರು–ಮಹಾರಾಷ್ಟ್ರ ಗಡಿ ವಿವಾದವನ್ನು ಪರಿಹರಿಸುವ ಸಲುವಾಗಿ ನಿಶ್ಚಿತ ಕಾಲಾವಧಿ ಯನ್ನು ಗೊತ್ತು ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕೆ.ಸಿ.ಪಂತ್ ಅವರು, ಮರಾಠಿ ಮಾತನಾಡುವ ಜನ ಅಧಿಕವಾಗಿರುವ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ವಿಲೀನಗೊಳಿಸಬೇಕು ಎಂದು ಒತ್ತಾಯಿಸಿದ ನಿಯೋಗವೊಂದಕ್ಕೆ ತಿಳಿಸಿದರೆಂದು ಗೊತ್ತಾಗಿದೆ.

‘ವಂಶವೃಕ್ಷ’ ವರ್ಷದ ಶ್ರೇಷ್ಠ ಚಿತ್ರ

ADVERTISEMENT

ಬೆಂಗಳೂರು, ನ. 23– ಗಿರೀಶ ಕಾರ್ನಾಡ ಮತ್ತು ಬಿ.ವಿ. ಕಾರಂತ ಅವರು ನಿರ್ದೇಶಿಸಿರುವ ‘ವಂಶವೃಕ್ಷ’ ಚಿತ್ರಕ್ಕೆ ರಾಜ್ಯ ಸರ್ಕಾರದ ಶ್ರೇಷ್ಠ ಚಿತ್ರ ಪ್ರಶಸ್ತಿ ದೊರಕಿದೆ.

1971ರಲ್ಲಿ ತಯಾರಾದ ಚಿತ್ರಗಳ ಪೈಕಿ ಎರಡನೆಯ ಬಹುಮಾನ ‘ಬಂಗಾರದ ಮನುಷ್ಯ’ ಚಿತ್ರಕ್ಕೂ, ಮೂರನೆಯ ಬಹುಮಾನ ‘ಯಾವ ಜನ್ಮದ ಮೈತ್ರಿ’ ಮತ್ತು ಸಿಪಾಯಿ ರಾಮು’ ಚಿತ್ರಗಳಿಗೂ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.