ADVERTISEMENT

50 ವರ್ಷಗಳ ಹಿಂದೆ: ಬುಧವಾರ 1-9-1971

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 19:30 IST
Last Updated 31 ಆಗಸ್ಟ್ 2021, 19:30 IST
   

ಇನ್ನೂ ಬರಬೇಕಾದ ನೆರವಿಗಾಗಿ ಕೇಂದ್ರಕ್ಕೆ ರಾಜ್ಯದ ಒತ್ತಾಯ
ಬೆಂಗಳೂರು, ಆ. 31–
ಭರವಸೆ ನೀಡಲಾಗಿರುವ ಆರ್ಥಿಕ ನೆರವಿನಲ್ಲಿನ ನೀಡದಿರುವ ಭಾಗವನ್ನು ವಿಳಂಬ ಮಾಡದೇ ತಕ್ಷಣ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ತುರ್ತು ಮನವಿ ಮಾಡಿಕೊಂಡಿದೆ.

ಹಣವನ್ನು ಒದಗಿಸುವುದರಲ್ಲಿ ವಿಳಂಬವಾದರೆ ಈಗಾಗಲೇ ಉದ್ದೇಶಿತ ಕಾರ್ಯಗಳ ವೆಚ್ಚವನ್ನು ಪೂರೈಸಲು
ಕಷ್ಟವಾಗಿ ರಾಜ್ಯದಲ್ಲಿ ತೀವ್ರ ತೊಂದರೆ ಒದಗುವ ಸಂಭವವಿದೆ ಎಂಬುದನ್ನು ಕೇಂದ್ರಕ್ಕೆ ತಿಳಿಸಲಾಗಿದೆ ಎಂದು ಇಲ್ಲಿ ತಿಳಿದು ಬಂದಿದೆ.

ಸಜ್ಜಾಗಿರಲು ಸೇನೆಗೆ ಸೂಚನೆ
ನವದೆಹಲಿ, ಆ. 31–
ಸಜ್ಜಾಗಿರುವಂತೆ ರಾಷ್ಟ್ರದ ಭೂ, ವಾಯು ಮತ್ತು ನೌಕಾ ಪಡೆಗಳಿಗೆ ಸೂಚಿಸಲಾಗಿದೆ.

ADVERTISEMENT

ಪಾಕಿಸ್ತಾನ ಯುದ್ಧದ ಬೆದರಿಕೆ ಹಾಕುತ್ತಿ ರುವುದರಿಂದ ಈ ಕ್ರಮ ಮುಂಜಾಗ್ರತಾ ಸ್ವರೂಪದ್ದೆಂದೂ ಬಲ್ಲ ವೃತ್ತಗಳು ತಿಳಿಸಿವೆ.

ಪೂರ್ವದ ಗಡಿಯಲ್ಲಿ ಪಾಕಿಸ್ತಾನದ ಸೈನಿಕ ಚಟುವಟಿಕೆಗಳು ಹೆಚ್ಚಿರುವುದೂ ಹಾಗೂ ಪಾಕಿಸ್ತಾನದೊಡನೆಯ ಗಡಿ ಬಳಿ ವಿಧ್ವಂಸಕ ಕೃತ್ಯಗಳು ಮತ್ತು ಬುಡಮೇಲು ಚಟುವಟಿಕೆಗಳು ಹೆಚ್ಚುತ್ತಿರುವುದೂ ಈ ಕ್ರಮಕ್ಕೆ ಕಾರಣವೆಂದೂ ಆ ವೃತ್ತಗಳು
ತಿಳಿಸಿರುವುದಾಗಿ ‘ಪೇಟ್ರಯಾಟ್’ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.