1978ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ನಗರದ ಕ್ಯಾತ್ಸಂದ್ರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಭಾಗವಹಿಸಿದ್ದ ಕ್ಷಣ.
1977ರಲ್ಲಿ ಚುನಾವಣೆ ಪೂರ್ವದಲ್ಲಿ ಜಯಪ್ರಕಾಶ ನಾರಾಯಣ ಅವರು ಧಾರವಾಡದಲ್ಲಿ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಬಂದ ಕ್ಷಣ. ಚಿತ್ರದಲ್ಲಿ ವೀರೇಂದ್ರ ಪಾಟೀಲ, ಚಂದ್ರಶೇಖರ ಪಾಟೀಲ (ಚಂಪಾ) ಅವರಿದ್ದಾರೆ. ಚಿತ್ರ: ಶಶಿ ಸಾಲಿ, ಹುಬ್ಬಳ್ಳಿ
1984ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಂದಿರಾಗಾಂಧಿಯವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮತನಾಡಲು ಧಾರವಾಡಕ್ಕೆ ಆಗಮಿಸಿದ್ದರು. ಮಹಿಳಾ ಪ್ರತಿನಿಧಿಗಳಾದ ಎಲ್ಲಮ್ಮ ನಾಯ್ಕರ, ಮಾರ್ಗರೇಟ್ ಆಳ್ವಾ, ಮೋನಿಕಾ ದಾಸ್, ಲೀಲಾವತಿ ಚರಂತಿಮಠ ಇದ್ದರು.
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 1978ರಲ್ಲಿ ನಡೆದ ಉಪಚುನಾವಣೆ ಸಂದರ್ಭದಲ್ಲಿ ಇಂದಿರಾಗಾಂಧಿ ಅವರು ಜಿಲ್ಲ ಮೈದಾನದಿಂದ ಪ್ರಚಾರಕ್ಕೆ ತೆರೆದ ಜೀಪಿನಲ್ಲಿ ಹೊರಟಿದ್ದು. – ಸಂಗ್ರಹ ಚಿತ್ರ/ ಎ.ಎಲ್. ನಾಗರಾಜ್
1984ರ ನವೆಂಬರ್ 26ರಂದು ಲೋಕಸಭಾ ಚುನಾವಣೆ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಚಂದ್ರಶಂಖರ್ ಅವರು ಜಾರ್ಜ್ ಫರ್ನಾಂಡಿಸ್ ಅವರೊಂದಿಗೆ ಮಾತುಕತೆ ನಡೆಸಿದರು.
ಮಂಗಳೂರಿನ ನೆಹರೂ ಮೈದಾನಕ್ಕೆ ವಾಜಪೇಯಿ ಅವರು 1996ರಲ್ಲಿ ಚುನಾವಣಾ ಪ್ರಚಾರಕ್ಕೆ ಬಂದ ಕ್ಷಣ. ವಿ. ಧನಂಜಯ ಕುಮಾರ್, ಡಾ.ವಿ.ಎಸ್. ಆಚಾರ್ಯ ಇದ್ದರು. –ಚಿತ್ರ: ಯಜ್ಞ ಆಚಾರ್ಯ, ಮಂಗಳೂರು