ADVERTISEMENT

ಅಮೃತಜಲವೆಂಬ ಗೊಬ್ಬರ

ಕೃಷಿ ಟಿಪ್ಸ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2016, 19:30 IST
Last Updated 28 ನವೆಂಬರ್ 2016, 19:30 IST

10 ಕೆ.ಜಿ. ಗೋಮೂತ್ರ ಮತ್ತು 10 ಕೆ.ಜಿ. ಗೋಮಯವನ್ನು ಒಟ್ಟು ಸೇರಿಸಬೇಕು. ಇದಕ್ಕೆ ಅರ್ಧ ಕೆ.ಜಿ ಬೆಲ್ಲ ಸೇರಿಸಿ ಕಲಿಸಿ ಮಡಕೆಯೊಂದರಲ್ಲಿ ಹಾಕಿ ಹತ್ತು ದಿನ ಮುಚ್ಚಿಡಬೇಕು. ಬಳಿಕ ತೆಗೆದಾಗ ಇದು ಅಮೃತಜಲವಾಗುತ್ತದೆ. ಇದು ಉತ್ತಮ ಗೊಬ್ಬರ.

ಸಸ್ಯಗಳಿಗೆ ಬೇಕಾದ ಸೂಕ್ಷ್ಮಾಣು ಜೀವಿಗಳನ್ನು ಬೆಳೆಸುವಲ್ಲಿ ನೆರವಾಗುತ್ತದೆ. ಅದಕ್ಕೆ ನೂರು ಲೀಟರ್ ನೀರು ಸೇರಿಸಿ ಒಂದು ಎಕರೆ ಭೂಮಿಗೆ ಸಿಂಪಡಿಸಿದರೆ ಎರಡು ಪಟ್ಟು ಫಸಲು ಬರುತ್ತದೆ. ಇದಕ್ಕೆ 200 ಗ್ರಾಂ. ಜೇನು ತುಪ್ಪ, 200 ಗ್ರಾಂ ಶುದ್ಧ ತುಪ್ಪ ಹಾಗೂ 200 ಗ್ರಾಂ ಮೊಸರು ಸೇರಿಸಿದರೆ ಅಮೃತಜಲ ಸಾಂದ್ರತೆ ಹೆಚ್ಚಿ, ಗುಣ ಇನ್ನಷ್ಟು ಹೆಚ್ಚುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT