ADVERTISEMENT

ಒಂದಾದ ಮನಸುಗಳು

​ಪ್ರಜಾವಾಣಿ ವಾರ್ತೆ
Published 26 ಮೇ 2018, 19:30 IST
Last Updated 26 ಮೇ 2018, 19:30 IST

– ಶಿವಕುಮಾರ ಕರನಂದಿ

ಮನದ ಗೂಡಿನೊಳಗೆ ಮಾತೊಂದು

ಮಲಗಿದೆ ಸದ್ದುಗದ್ದಲವಿಲ್ಲದೆ

ADVERTISEMENT

ಮೌನ ಮೀರಿ ಬರಲೊಲ್ಲದು

ಅಹಂ ಎಂಬ ಬೇಲಿಯ ದಾಟಿ

ಚೆಂದದ ಗೆಳೆತನ ಮುರಿದು ಬಿದ್ದಿದೆ

ಅವಶೇಷಗಳಡಿ ಹುದುಗಿ ಹೋಗಿದೆ

ಒಂದೇ ಆತ್ಮ ಎರಡು ದೇಹಗಳಂದು

ತುಡಿದ ಜೀವ ದೂರ ಸರಿದಿವೆ ಇಂದು

ಮಾತಾಗಲು ಮನಸ್ಸಿಲ್ಲ ಇಬ್ಬರೊಳಗೆ

ನರಳುತಿವೆ ಮನಸುಗಳ ಒಳಗೊಳಗೆ

ಮುಖವಾಡ ಬಿಂಕ ಬಿಗುಮಾನದೊಳಗೆ

ಮೊಗದಲಿ ಮುಗುಳು ನಗೆ ತೋರಿಕೆಗೆ

ತಾನೇ ಮೇಲು ಎನ್ನುವುದ ಬಿಟ್ಟು

ಮಾತಿಗೆ ಮಾತಾಗಬೇಕು ಮನ

ಚೈತ್ರದ ಚಿಗುರಂತೆ ಸ್ನೇಹ ಮತ್ತೆ ಮೊಳೆಯಲಿ

ನಿತ್ಯ ಹಚ್ಚ ಹಸಿರಂತೆ ಕಂಗೊಳಿಸಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.