– ಶಿವಕುಮಾರ ಕರನಂದಿ
ಮನದ ಗೂಡಿನೊಳಗೆ ಮಾತೊಂದು
ಮಲಗಿದೆ ಸದ್ದುಗದ್ದಲವಿಲ್ಲದೆ
ಮೌನ ಮೀರಿ ಬರಲೊಲ್ಲದು
ಅಹಂ ಎಂಬ ಬೇಲಿಯ ದಾಟಿ
ಚೆಂದದ ಗೆಳೆತನ ಮುರಿದು ಬಿದ್ದಿದೆ
ಅವಶೇಷಗಳಡಿ ಹುದುಗಿ ಹೋಗಿದೆ
ಒಂದೇ ಆತ್ಮ ಎರಡು ದೇಹಗಳಂದು
ತುಡಿದ ಜೀವ ದೂರ ಸರಿದಿವೆ ಇಂದು
ಮಾತಾಗಲು ಮನಸ್ಸಿಲ್ಲ ಇಬ್ಬರೊಳಗೆ
ನರಳುತಿವೆ ಮನಸುಗಳ ಒಳಗೊಳಗೆ
ಮುಖವಾಡ ಬಿಂಕ ಬಿಗುಮಾನದೊಳಗೆ
ಮೊಗದಲಿ ಮುಗುಳು ನಗೆ ತೋರಿಕೆಗೆ
ತಾನೇ ಮೇಲು ಎನ್ನುವುದ ಬಿಟ್ಟು
ಮಾತಿಗೆ ಮಾತಾಗಬೇಕು ಮನ
ಚೈತ್ರದ ಚಿಗುರಂತೆ ಸ್ನೇಹ ಮತ್ತೆ ಮೊಳೆಯಲಿ
ನಿತ್ಯ ಹಚ್ಚ ಹಸಿರಂತೆ ಕಂಗೊಳಿಸಲಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.