
ಪ್ರಜಾವಾಣಿ ವಾರ್ತೆರಪ ರಪ ರಪ ರಪ
ಮಳೆ ಹನಿ ಸುರಿದಾಗ
ಮಣ್ಣದು ಮೆಲ್ಲಗೆ ಅರಳುವುದು
ನೆಲವು ಘಮ ಘಮ ಅನ್ನುವುದು
ನೆಲದಲಿ ಹುದುಗಿದ ಬೀಜಗಳೆಲ್ಲ
ಪ್ರಶ್ನಾರ್ಥಕದಂತಾಗುವುವು
ರೈತನ ಮುಂದೆ ಪ್ರಶ್ನೆಯ ಕೇಳುತ
ಉತ್ತರ ಹುಡುಕಲು ಹಚ್ಚುವುವು
ರಪ ರಪ ರಪ ರಪ
ಮಳೆಹನಿ ಸುರಿದಾಗ
ಕುವೆಂಪು ರಚಿಸಿದ ರೈತನ ಹಾಡು
ಹೊಲದಲಿ ಅಲೆಯಾಗೇಳುವುದು
ರೈತನ ಮೊಗದಲಿ ನಗೆಯುಕ್ಕುವುದು
ಮಾತಲಿ ಹೂವೇ ಸುರಿಯುವುದು
ಕನಸುಗಳೆಷ್ಟೋ ಗರಿಗಳ ಬಿಚ್ಚಿ
ನವಿಲಿನ ನರ್ತನ ನಡೆಯುವುದು
ರಪ ರಪ ರಪ ರಪ
ಮಳೆಹನಿ ಸುರಿದಾಗ
ಕಾಡಿಗೆ ಕಾಡೇ ಹಾಡುವುದು
ನಾಡೇ ಸಂತಸದಿ ಕುಣಿಯುವುದು
ನದಿ ನದ ಸೊಕ್ಕಿ ಹರಿಯುವುವು
ಝರಿಗಳು ವೀಣೆಯ ನುಡಿಸುವುವು
ಕೆರೆಕಟ್ಟೆಗಳು ತುಂಬುವುವು
ತರುಕರು ಖುಷಿಯಲಿ ಕುಣಿಯುವುವು
ರಪ ರಪ ರಪ ರಪ
ಮಳೆಹನಿ ಸುರಿದಾಗ
ಆಗಸದಲಿ ಕಾಮನಬಿಲ್ಲು ಮೂಡುವುದು
ಭೂದೇವಿ ನಾಚುತ ನಿಲ್ಲುವಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.