ADVERTISEMENT

ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 19:30 IST
Last Updated 14 ಮಾರ್ಚ್ 2020, 19:30 IST
   

ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು

ಲೇ: ಶಾಂತಿ ಕೆ. ಅಪ್ಪಣ್ಣ

ಪ್ರ: ಸಂಗಾತ ಪುಸ್ತಕ

ADVERTISEMENT

ಮೊ: 93417 57653

ಬದುಕಿನ ಸುತ್ತವೇ ಹೆಣೆದ ಕಥೆಗಳು ಇವು. ಮನುಷ್ಯ ಸಂಬಂಧಗಳು ಮತ್ತು ಪ್ರೀತಿವಾತ್ಸಲ್ಯಗಳೇ ಈ ಕಥೆಗಳ ಜೀವದ್ರವ್ಯವಾಗಿ ಮೂಡಿಬಂದಿವೆ.ಈ ಸಂಕಲನದಲ್ಲಿ 13 ಕಥೆಗಳಿವೆ. ಸ್ತ್ರೀ ಸಂವೇದನೆಯೂ ಇವುಗಳಲ್ಲಿ ಹಾಸುಹೊಕ್ಕಾಗಿದೆ.

ಕೊನೆಯಲ್ಲಿ ಹೇಳಬೇಕಾದ್ದನ್ನು ನೇರವಾಗಿ ಹೇಳದೆ ಸೂಚ್ಯವಾಗಿ ಧ್ವನಿಸುವ ಗುಣ ಮತ್ತು ಕ್ರಮವನ್ನು ಕಥೆಗಾರ್ತಿ ಕಾಯ್ದುಕೊಂಡಿದ್ದಾರೆ.ಈ ಗಟ್ಟಿತನವೇ ಎಲ್ಲ ಕಥೆಗಳಲ್ಲಿಯೂ ಢಾಳಾಗಿಯೂ ಕಾಣಿಸುತ್ತವೆ ಮತ್ತು ಓದುಗರನ್ನು ಕಾಡುತ್ತವೆ. ಎಲ್ಲೋ ಯಾವುದೋ ಹೊತ್ತಿನಲ್ಲಿ ಮನದೊಳಗೆ ಮಿಂಚಿನಂತೆ ಏಳುವ, ಯಾವುದೋ ಒಂದು ಅನಾಮಿಕ ಎಳೆಯನ್ನು ಹಿಡಿದುಕೊಂಡು ಅದು ಕೊಂಡೊಯ್ಯುವ ಹಾದಿಯಲ್ಲಿ ನಡೆಸುತ್ತಾ ಸುಖ ನೀಡುವ ಕಥೆಗಳು ಇವು ಎಂದರೆ ಉತ್ಪ್ರೇಕ್ಷೆ ಎನಿಸದರು.

ಇಲ್ಲಿಯ ಬಹುತೇಕ ಕಥೆಗಳು ನಮ್ಮವೇ ಎನ್ನಿಸುವಷ್ಟು ಆಪ್ತವೂ, ಮಧುರವೂ ಆಗಿವೆ. ಆದರೆ,ಪ್ರತಿ ಕಥೆಯಲ್ಲೂ ಸಣ್ಣಸಣ್ಣ ವಿವರಗಳನ್ನು ಕಥೆಗಾರ್ತಿ ಪೋಣಿಸುತ್ತಾ ಹೋಗಿರುವುದು ಸರಾಗ ಓದಿನ ಹಾದಿಯನ್ನು ತುಸು ತ್ರಾಸಗೊಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.