‘ವಂದೇ ಮಾತರಂ’ ದೇಶ ಭಕ್ತಿ ಗೀತೆಗೆ ನಾಡಿನ ಖ್ಯಾತ ಕಲಾವಿದರು ಧ್ವನಿಯಾಗಿ ಸಂಗೀತ ಆಲ್ಬಂನ್ನು ಹೊರತಂದಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲಿ ಲಹರಿ ಸಂಸ್ಥೆ ಈ ಗೀತೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ.
ನಾಡಿನ ಹಿರಿ–ಕಿರಿಯ ಕಲಾವಿದರು, ತಂತ್ರಜ್ಞರು ಸೇರಿ ಈ ಗಾಯನ– ವಿಡಿಯೋವನ್ನು ನಿರ್ಮಿಸಿದ್ದಾರೆ. ವಿಡಿಯೋಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಬಂಕಿಮ್ ಚಂದ್ರ ಚಟರ್ಜಿ ಅವರ ಈ ಗೀತೆಗೆ ಸಂಗೀತ ಸಂಯೋಜಕ ಎನ್.ಎಸ್. ಪ್ರಸಾದ್ ರಾಗ ಸಂಯೋಜನೆ ಮಾಡಿದ್ದಾರೆ.ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ, ಇಂದು ವಿಶ್ವನಾಥ್, ರೋಹಿಣಿ ಮೋಹನ್, ದಿವ್ಯಾ ರಾಘವನ್, ಮಂಗಳರವಿ, ಸುನೀತಾ ಮುರಳಿ, ಪಂಚಮ ಹಳಿಬಂಡಿ, ಬಿ . ವಿ. ಪ್ರದೀಪ್, ಬಿ. ವಿ. ಪ್ರವೀಣ್, ಮತ್ತು ಗಣೇಶ್ ದೇಸಾಯಿ ಧ್ವನಿಯಾಗಿದ್ದಾರೆ. ಜೊತೆಗೆ ಪ್ರವೀಣ್ ಗೋಡ್ಖಿಂಡಿ, ಪ್ರವೀಣ್ ಡಿ. ರಾವ್ ಅವರೂ ಕೈಜೋಡಿಸಿದ್ದಾರೆ.
ರತ್ನಮಾಲಾ ಪ್ರಕಾಶ್ ಅವರ ಪರಿಕಲ್ಪನೆಯಲ್ಲಿ ಈ ವಿಡಿಯೋ ಹಾಡು ಮೂಡಿ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.