ADVERTISEMENT

ರವೀಂದ್ರ ಭಟ್ಟ ಕುಳಿಬೀಡು ಅವರ ಕವನ: ಅಕ್ಷರಗಳಿಗೂ ಆಯಾಸವಾಗಿದೆ…

ರವೀಂದ್ರ ಭಟ್ಟ ಕುಳಿಬೀಡು
Published 23 ಫೆಬ್ರುವರಿ 2025, 0:20 IST
Last Updated 23 ಫೆಬ್ರುವರಿ 2025, 0:20 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅರ್ಧ ಶತಮಾನಕ್ಕಿಂತಲೂ ಅಧಿಕ

ನನ್ನ ಬೆರಳಿನ ಹೊರಳುವಿಕೆಯಲ್ಲಿ

ADVERTISEMENT

ನಾಲಿಗೆಯ ಚಲನೆಯಲ್ಲಿ

ಬೇಕು ಬೇಕಾದಂತೆ ಅಕ್ಷರಗಳು

ಬಿಡಿಯಾಗಿ – ಹೊಂದಿಕೊಂಡು ಪರಸ್ಪರ

ಶಬ್ದ-ವಾಕ್ಯಗಳಾಗಿ-ಉದ್ಗಾರಗಳೂ ಬಂದು

ಇನ್ನಿಲ್ಲದಷ್ಟು ಬಳಕೆ ಎಚ್ಚರದಲ್ಲಿ

ಎಚ್ಚರಿಕೆಯ ಬಳಕೆ ಖಂಡಿತಾ ಅಲ್ಲ.

ಕಾರಣಗಳಿದ್ದು-ಕಾರಣಗಳಿರದೆ ಲಿಪಿಗಳಲ್ಲಿ

ಅವುಗಳ ತರಹೆವಾರಿ ಧ್ವನಿಗಳಲ್ಲಿ

ಕಾಲ ಕಳೆದಂತೆ – ಅವೇ ಸರ್ವಸ್ವವಾಗಿ

ಅಕ್ಷರವೇ ಅನ್ನವಾಗಿ


ಅರುವತ್ತಾದಾಗ – ಥಟ್ಟನೆ ವೃತ್ತಿಯಿಂದ ನಿವೃತ್ತಿ

ನಿಧಾನವಾಗಿ ಅಕ್ಷರಗಳ ಬಳಕೆ

ನನಗರಿವಿಲ್ಲದಂತೆ – ಜೋಡಿಸಲಾಗದಂತೆ

ಚಲ್ಲಾಪಿಲ್ಲಿಯಾಗಿ ನೆಲಕ್ಕೊರಗಿದ್ದು ಕಂಡಾಗ

ಅನ್ನಿಸಿದ್ದು – ಅಕ್ಷರಗಳಿಗೂ ಆಯಾಸವಾಗಿದೆ.

ಒಂದಿಷ್ಟು ಕಾಲ ಒರಗಿ – ಕಳೆದುಕೊಂಡರೆ ಸುಸ್ತು

ಮತ್ತೆ ಕೈಗೆ – ಬಾಯಿಗೆ ಬರಬಹುದು

ಯಾವುದಕ್ಕೂ ಕಾಯುತ್ತಿದ್ದೇನೆ – ಅಂಥ ಕಾಲಕ್ಕೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.