ADVERTISEMENT

‘ಕೃಷಿ ಆಧಾರಿತ ಕ್ಲಸ್ಟರ್‌ಗೆ ರಿಯಾಯ್ತಿ’

ಆಗ್ರೊ ಫುಡ್‌ಟೆಕ್‌ ಎಕ್ಸ್‌ಪೊ ಲಾಂಛನ ಬಿಡುಗಡೆ, ಜಾಲತಾಣಕ್ಕೆ ಮುಖ್ಯಮಂತ್ರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 20:00 IST
Last Updated 16 ಡಿಸೆಂಬರ್ 2019, 20:00 IST
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಫ್‌ಕೆಸಿಸಿಐನ ಆಗ್ರೊ ಫುಟ್‌ ಟೆಕ್‌ ಎಕ್ಸ್‌ಪೋದ ಲಾಂಛನ ಬಿಡುಗಡೆ ಮಾಡಿದರು. ಎಕ್ಸ್‌ಪೊದ ಅಧ್ಯಕ್ಷ ಪಿ.ವಿ. ರೈ, ಎಫ್‌ಕೆಸಿಸಿಐನ ಹಿರಿಯ ಉಪಾಧ್ಯಕ್ಷ ಪೆರಿಕಲ್ ಎಂ. ಸುಂದರ್‌, ಅಧ್ಯಕ್ಷ ಸಿ.ಆರ್‌. ಜನಾರ್ಧನ್ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು  –ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಫ್‌ಕೆಸಿಸಿಐನ ಆಗ್ರೊ ಫುಟ್‌ ಟೆಕ್‌ ಎಕ್ಸ್‌ಪೋದ ಲಾಂಛನ ಬಿಡುಗಡೆ ಮಾಡಿದರು. ಎಕ್ಸ್‌ಪೊದ ಅಧ್ಯಕ್ಷ ಪಿ.ವಿ. ರೈ, ಎಫ್‌ಕೆಸಿಸಿಐನ ಹಿರಿಯ ಉಪಾಧ್ಯಕ್ಷ ಪೆರಿಕಲ್ ಎಂ. ಸುಂದರ್‌, ಅಧ್ಯಕ್ಷ ಸಿ.ಆರ್‌. ಜನಾರ್ಧನ್ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಿರ್ದಿಷ್ಟ ಪ್ರದೇಶದಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳಿಗೆ ಅನು ಗುಣವಾಗಿ ಕೈಗಾರಿಕಾ ಕ್ಲಸ್ಟರ್‌ ಸ್ಥಾಪಿಸುವುದಕ್ಕೆ ಆಕರ್ಷಕ ಉತ್ತೇಜನಾ ಕೊಡುಗೆಗಳನ್ನು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

‘ರೈತರ ವರಮಾನವನ್ನು 2022ರ ಒಳಗಾಗಿ ಎರಡು ಪಟ್ಟು ಹೆಚ್ಚಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಾಗಿದೆ. ಇದಕ್ಕೆ ಪೂರಕವಾಗಿಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್‌ಕೆಸಿಸಿಐ) ಬೆಂಗಳೂರಿನಲ್ಲಿ 2020ರ ಏಪ್ರಿಲ್ 22-26ರವರೆಗೆ ಆಗ್ರೊ ಫುಡ್‌ಟೆಕ್ ಆಯೋಜಿಸಿರುವುದು ಶ್ಲಾಘನೀಯ' ಎಂದರು.

ಎಫ್‌ಕೆಸಿಸಿಐನ ಸರ್‌.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಎಕ್ಸ್‌ಪೊದ ಲಾಂಛನ‌ ಬಿಡುಗಡೆ ಮಾಡಿ, ಜಾಲತಾಣಕ್ಕೆ ಚಾಲನೆ ನೀಡಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬ್ರೋಷರ್‌ ಬಿಡುಗಡೆ ಮಾಡಿದರು.

ADVERTISEMENT

ಎರಡು ವರ್ಷಕ್ಕೊಮ್ಮೆ ಎಕ್ಸ್‌ಪೊ: ‘2020ರ ಏಪ್ರಿಲ್‌ನ ಬಳಿಕಪ್ರತಿ ಎರಡು ವರ್ಷಕ್ಕೊಮ್ಮೆ ಎಕ್ಸ್‌ಪೊ ನಡೆಸಲಾಗು ವುದು. ಇಸ್ರೇಲ್, ನೆದರ್ಲೆಂಡ್ಸ್, ಆಸ್ಟ್ರೇಲಿಯಾ ಭಾಗವಹಿಸುವುದಾಗಿ ಹೇಳಿವೆ’ ಎಂದು ಎಫ್‌ಕೆಸಿಸಿಐನ ಅಧ್ಯಕ್ಷ ಸಿ.ಆರ್‌. ಜನಾರ್ಧನ್ ತಿಳಿಸಿದರು.

‘ಕೃಷಿ ಉತ್ಪನ್ನಗಳ ಸಂಸ್ಕರಣೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಬೆಳಕು ಹರಿಸಲಾಗುವುದು. ಯುವಜನತೆಯನ್ನು ಕೃಷಿಯೆಡೆಗೆ ಸೆಳೆಯುವುದು ಇದರ ಮೂಲ ಉದ್ದೇಶವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.