ADVERTISEMENT

₹ 3 ಲಕ್ಷ ಕೋಟಿ ಹೆಚ್ಚುವರಿ ಕೊಡುಗೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 20:00 IST
Last Updated 8 ಏಪ್ರಿಲ್ 2020, 20:00 IST
ಎಸ್‌ಬಿಐ
ಎಸ್‌ಬಿಐ   

ಮುಂಬೈ: ದೇಶಿ ಆರ್ಥಿಕತೆಯು ಕೊರೊನಾಗೆ ಸಂಬಂಧಿಸಿದ ಬಿಕ್ಕಟ್ಟುಗಳಿಂದ ಹೊರಬರಲು ₹ 3 ಲಕ್ಷ ಕೋಟಿ ಮೊತ್ತದ ಹೆಚ್ಚುವರಿ ಕೊಡುಗೆ ಘೋಷಿಸುವಂತೆ ಎಸ್‌ಬಿಐನ ಆರ್ಥಿಕ ತಜ್ಞರು ಒತ್ತಾಯಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಘೋಷಿಸಿರುವ ₹ 1.75 ಲಕ್ಷ ಕೋಟಿ ಕೊಡುಗೆಯಲ್ಲಿ ₹ 73 ಸಾವಿರ ಕೋಟಿ ಮಾತ್ರವೇ ಹೊಸದಾಗಿದ್ದು, ಉಳಿದ ಮೊತ್ತವೆಲ್ಲವೂ ಬಜೆಟ್‌ನಲ್ಲಿಯೇ ಘೋಷಿಸಿದ್ದಾಗಿದೆ. ಹೀಗಾಗಿ ಸದ್ಯದ ಬಿಕ್ಕಟ್ಟನ್ನು ಎದುರಿಸಲು ಭಾರಿ ಮೊತ್ತದ ವಿತ್ತೀಯ ಕೊಡುಗೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಕೋವಿಡ್‌ ಸೋಂಕಿಗೆ ಒಳಗಾಗಿರುವ 284 ಜಿಲ್ಲೆಗಳಲ್ಲಿಯೇ ಬ್ಯಾಂಕಿಂಗ್‌ ವಲಯದ ಶೇ 98ರಷ್ಟು ಸಾಲ ಇದೆ. ಹೀಗಾಗಿ ಬ್ಯಾಂಕಿಂಗ್‌ ವ್ಯವಸ್ಥೆ ಬಗ್ಗೆಯೂ ಸರ್ಕಾರ ಸೂಕ್ಷ್ಮವಾಗಿ ಗಮನ ಹರಿಸಬೇಕಿದೆ ಎಂದೂ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.