ಮುಂಬೈ: ಎಲ್ಲಾ ಬ್ಯಾಂಕ್ ಖಾತೆಗಳೂ 2021ರ ಮಾರ್ಚ್ 31ರ ಒಳಗಾಗಿ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕ್ಗಳಿಗೆ ಸೂಚನೆ ನೀಡಿದ್ದಾರೆ.
ಭಾರತೀಯ ಬ್ಯಾಂಕ್ಗಳ ಒಕ್ಕೂಟದ (ಐಬಿಎ) 73ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ವಿತ್ತೀಯ ಸೇರ್ಪಡೆಯ ಕೆಲಸವು ಇನ್ನೂ ಮುಗಿದಿಲ್ಲ. ಈಗಲೂ ಹಲವು ಬ್ಯಾಂಕ್ ಖಾತೆಗಳು ಆಧಾರ್ನೊಂದಿಗೆ ಜೋಡಣೆ ಆಗಿಲ್ಲ. ಅಗತ್ಯ ಇರುವ ಮತ್ತು ಅನ್ವಯ ಆಗುವ ಕಡೆಗಳಲ್ಲಿ ಪ್ರತಿ ಖಾತೆಯನ್ನೂ ಪ್ಯಾನ್ಗೆ ಜೋಡಿಸಿರಬೇಕು. ಅದೇ ರೀತಿ ಬ್ಯಾಂಕ್ನಲ್ಲಿರುವ ಪ್ರತಿಯೊಂದು ಖಾತೆಯನ್ನೂಡಿಸೆಂಬರ್ ಒಳಗಾಗಿ ಆಧಾರ್ಗೆ ಜೋಡಿಸಿ. ಸಾಧ್ಯವಾಗದೇ ಇದ್ದರೆ 2021ರ ಮಾರ್ಚ್ 31ರ ಒಳಗಾಗಿ ಪೂರ್ಣಗೊಳಿಸಿರಬೇಕು’ ಎಂದು ತಿಳಿಸಿದ್ದಾರೆ.
ಡಿಜಿಟಲ್ ರೂಪದಲ್ಲಿ ನಡೆಯದೇ ಇರುವ ವಹಿವಾಟಿಗೆ ಉತ್ತೇಜನ ನೀಡಬಾರದು ಎಂದು ಬ್ಯಾಂಕ್ಗಳಿಗೆ ಹೇಳಿರುವ ಅವರು, ರುಪೇ ಕಾರ್ಡ್ ಬಳಕೆಗೆ ಮಾತ್ರವೇ ಪ್ರೋತ್ಸಾಹಿಸುವಂತೆ ಹಾಗೂ ರಾಷ್ಟ್ರೀಯ ಪಾವತಿ ನಿಗಮವನ್ನು (ಎನ್ಪಿಸಿಐ) ದೇಶದ ಬ್ರ್ಯಾಂಡ್ ಆಗಿ ರೂಪಿಸುವಂತೆಯೂ ಅವರು ಬ್ಯಾಂಕ್ಗಳಿಗೆ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.