ADVERTISEMENT

₹2 ಲಕ್ಷ ಕೋಟಿ ದಾಟಿದ ಕರೂರು ವೈಶ್ಯ ಬ್ಯಾಂಕ್‌ ವಹಿವಾಟು

ಪಿಟಿಐ
Published 18 ಅಕ್ಟೋಬರ್ 2025, 15:52 IST
Last Updated 18 ಅಕ್ಟೋಬರ್ 2025, 15:52 IST
 ರಮೇಶ್ ಬಾಬು ಬಿ.
 ರಮೇಶ್ ಬಾಬು ಬಿ.   

ಚೆನ್ನೈ: ತಮಿಳುನಾಡು ಮೂಲದ ಕರೂರು ವೈಶ್ಯ ಬ್ಯಾಂಕ್‌ನ ಒಟ್ಟು ವ್ಯವಹಾರ ಸೆ‍ಪ್ಟೆಂಬರ್ ತ್ರೈಮಾಸಿಕದಲ್ಲಿ ₹2 ಲಕ್ಷ ಕೋಟಿ ದಾಟಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಮೇಶ್ ಬಾಬು ಬಿ. ಹೇಳಿದ್ದಾರೆ.

ಕಳೆದ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್‌ ₹473 ಕೋಟಿ ನಿವ್ವಳ ಲಾಭ ಗಳಿಸಿತ್ತು. ಈ ಬಾರಿ ₹574 ಕೋಟಿ ಲಾಭ ಗಳಿಸಿದ್ದು, ಲಾಭದ ಪ್ರಮಾಣ ಶೇ 21ರಷ್ಟು ಹೆಚ್ಚಳವಾಗಿದೆ. 

ಬ್ಯಾಂಕ್‌ನ ಒಟ್ಟು ವ್ಯವಹಾರ ಕಳೆದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹1,76,138 ಕೋಟಿಯಷ್ಟಿತ್ತು. ಅದು ಈ ಬಾರಿ ₹2,03,216 ಕೋಟಿಗೆ ಏರಿಕೆಯಾಗಿದ್ದು, ಶೇ 15ರಷ್ಟು ಏರಿಕೆ ಕಂಡಿದೆ. ಬ್ಯಾಂಕ್‌ನ ಒಟ್ಟು ಠೇವಣಿಯಲ್ಲಿ ಶೇ 15ರಷ್ಟು ಹೆಚ್ಚಳವಾಗಿದ್ದು, ₹1.10 ಲಕ್ಷ ಕೋಟಿಯಾಗಿದೆ. ಬ್ಯಾಂಕ್‌ ನೀಡಿದ ಸಾಲವು ₹92,724 ಕೋಟಿಯಾಗಿದ್ದು, ಶೇ 14ರಷ್ಟು ಏರಿಕೆಯಾಗಿದೆ ಎಂದು ಶನಿವಾರ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.