ಬರ್ಧಮಾನ್: ಆರೋಗ್ಯ ವಿಮಾ ಕಂತಿನ ಮೇಲಿನ ಜಿಎಸ್ಟಿ ರದ್ದು ಜಾರಿಗೆ ಬಂದರೆ, ಪಶ್ಚಿಮ ಬಂಗಾಳದ ಖಜಾನೆಗೆ ವಾರ್ಷಿಕ ₹900 ಕೋಟಿ ನಷ್ಟವಾಗಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸಾಮಾನ್ಯ ಜನರಿಗೆ ವೈದ್ಯಕೀಯ ಸವಲತ್ತು ಕೈಗೆಟುಕುವಂತೆ ಮಾಡಲು ಆರೋಗ್ಯ ವಿಮಾ ಕಂತಿನ ಮೇಲಿನ ಜಿಎಸ್ಟಿ ವಿನಾಯಿತಿ ನೀಡುವಂತೆ ಮೊದಲು ಒತ್ತಾಯಿಸಿದ್ದು ಪಶ್ಚಿಮ ಬಂಗಾಳ. ಈ ಜಿಎಸ್ಟಿ ಮನ್ನಾದಿಂದ ರಾಜ್ಯದ ಬೊಕ್ಕಸಕ್ಕೆ ಹೊರೆ ಬೀಳಲಿದೆ. ಆದರೆ ನಮಗೆ ಜನರ ಆರೋಗ್ಯವೇ ಮುಖ್ಯ ಎಂದು ಮಂಗಳವಾರ ಹೇಳಿದ್ದಾರೆ.
ಜಿಎಸ್ಟಿ ಕಡಿತದ ಬಳಿಕ ವಿಮಾ ಕಂಪನಿಗಳು ದರ ಹೆಚ್ಚಳ ಮಾಡದಂತೆ ನೋಡಿಕೊಳ್ಳಬೇಕು. ಕುಟುಂಬಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಆರೋಗ್ಯ ವಿಮಾ ಕಂತಿನ ಮೇಲೆ ಶೇ 18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಲಾಗುತ್ತಿದೆ. ಇದರಲ್ಲಿ ರಾಜ್ಯದ ವರಮಾನದ ಪಾಲು ಶೇ 9ರಷ್ಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.