ADVERTISEMENT

‘ಎಂಎಸ್‌ಎಂಇ: ಉನ್ನತಾಧಿಕಾರಿ ನೇಮಿಸಿ’

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 16:53 IST
Last Updated 27 ಜೂನ್ 2019, 16:53 IST

ನವದೆಹಲಿ (ಪಿಟಿಐ):ಎಂಎಸ್‌ಎಂಇ ವಲಯ ಎದುರಿಸುತ್ತಿರುವ ನಗದು ಲಭ್ಯತೆ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ, ವರದಿ ನೀಡಲು ಪ್ರಧಾನ ವ್ಯವಸ್ಥಾಪಕ ಅಥವಾ ಪ್ರಧಾನ ವ್ಯವಸ್ಥಾಪಕ ಮಟ್ಟದ ಅಧಿಕಾರಿಯನ್ನು ನೇಮಿಸುವಂತೆ ಕೇಂದ್ರ ಸರ್ಕಾರವು, ಸರ್ಕಾರಿ ಸ್ವಾಮ್ಯದಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.

ವರದಿ ಸಿದ್ಧಪಡಿಸುವ ವೇಳೆ,ಬ್ಯಾಂಕ್‌ಗಳಿಗೆ ಸಾಲ ಪಡೆದಿರುವ, ಸಾಲ ಬಾಕಿ ಉಳಿಸಿಕೊಂಡಿರುವ, ಸಾಲ ಮರು ಹೊಂದಾಣಿಕೆ ಅಥವಾ ವಸೂಲಿ ಪ್ರಕ್ರಿಯೆ ಕುರಿತು ಹಂತ ಹಂತವಾಗಿ ಮಾಹಿತಿ ಸಂಗ್ರಹಿಸಬಹುದು ಎಂದು ತಿಳಿಸಿದೆ.

ಹೊಸದಾಗಿ ಯಾವ ಎಂಎಸ್‌ಎಂಇಗಳಿಗೆ ಸಾಲ ನೀಡಲಾಗಿದೆ ಮತ್ತು ಯಾವ ಉದ್ದಿಮೆಗಳು ಬ್ಯಾಂಕ್‌ ವ್ಯಾಪ್ತಿಯಿಂದ ಹೊರಗೆ ಇವೆ ಎನ್ನುವ ಬಗ್ಗೆ ವಿವರವಾದ ವರದಿ ನೀಡುವಂತೆ ಬ್ಯಾಂಕ್‌ಗಳಿಗೆ ಕೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.