ನವದೆಹಲಿ: ಪಿಂಚಣಿ ಪರಿಷ್ಕರಣೆಗೆ ಒತ್ತಾಯಿಸಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ (ನಬಾರ್ಡ್) ಅಧಿಕಾರಿಗಳು, ನೌಕರರು ಮತ್ತು ನಿವೃತ್ತ ನೌಕರರು ಮಂಗಳವಾರ ಒಂದು ದಿನದ ಮುಷ್ಕರ ನಡೆಸಿದರು.
ನಬಾರ್ಡ್ನ ಅಧಿಕಾರಿಗಳು, ನೌಕರರು ಮತ್ತು ನಿವೃತ್ತ ಸಿಬ್ಬಂದಿಯ ಸಂಯುಕ್ತ ವೇದಿಕೆಯ (ಯುಎಫ್ಒಇಆರ್ಎನ್) ಅಡಿಯಲ್ಲಿ ಮುಷ್ಕರ ನಡೆಯಿತು. 2001ರಿಂದಲೂ ಪಿಂಚಣಿ ಪರಿಷ್ಕರಣೆ ಬಾಕಿ ಇದೆ. ಆರ್ಬಿಐ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ 2012ರಲ್ಲಿ ಪಿಂಚಣಿ ಪರಿಷ್ಕರಿಸಲಾಗಿದೆ. ಆದರೆ ನಬಾರ್ಡ್ನ ಪಿಂಚಣಿ ಸಮಸ್ಯೆಯ ಕುರಿತು ಹಣಕಾಸು ಸಚಿವಾಲಯವು ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.