ನವದೆಹಲಿ: ನೋಟು ರದ್ದತಿ ನಿರ್ಧಾರದಿಂದ ಉದ್ಭವಿಸಿದ್ದ ನಗದು ಕೊರತೆಯು ದೇಶದಾದ್ಯಂತ ಲಕ್ಷಾಂತರ ರೈತರನ್ನು ಸಂಕಷ್ಟಕ್ಕೆ ದೂಡಿತ್ತು ಎನ್ನುವ ತನ್ನ ಈ ಮೊದಲಿನ ತೀರ್ಮಾನಕ್ಕೆ ಕೇಂದ್ರ ಕೃಷಿ ಸಚಿವಾಲಯವು ಈಗ ಸಂಪೂರ್ಣ ತದ್ವಿರುದ್ಧವಾದ ನಿಲುವು ಪ್ರಕಟಿಸಿದೆ.
ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಗೆ ಸಲ್ಲಿಸಿದ ಪರಿಷ್ಕೃತ ಟಿಪ್ಪಣಿಯಲ್ಲಿ, ನೋಟು ರದ್ದತಿಯಿಂದ ಕೃಷಿ ವಲಯಕ್ಕೆ ಹೆಚ್ಚಿನ ಪ್ರಯೋಜನ ಲಭಿಸಿದೆ. ದತ್ತಾಂಶ ಕ್ರೋಡೀಕರಣದಲ್ಲಿನ ಲೋಪದಿಂದಾಗಿ ಈ ಮೊದಲಿನ ದೋಷಪೂರಿತ ತೀರ್ಮಾನಕ್ಕೆ ಬರಲಾಗಿತ್ತು ಎಂದು ಕಾರಣ ನೀಡಿದೆ.
ನೋಟು ರದ್ದತಿಯಿಂದ ಬೀಜ, ರಸಗೊಬ್ಬರಗಳ ಮಾರಾಟ ಹೆಚ್ಚಿತ್ತು. ಬಿತ್ತನೆ ಪ್ರದೇಶವೂ ವಿಸ್ತರಣೆಯಾಗಿತ್ತು ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.