ಬೆಂಗಳೂರು: ವಿಜಯ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ವಿಲೀನ ವಿರೋಧಿಸಿ, ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ (ಯುಎಫ್ಬಿಯು) ಕರ್ನಾಟಕ ಘಟಕ ಬುಧವಾರ ಧರಣಿಗೆ ಕರೆ ಕೊಟ್ಟಿದೆ.
ಬೆಂಗಳೂರಿನ ಟ್ರಿನಿಟಿ ವೃತ್ತದ ಬಳಿ ಇರುವ ವಿಜಯ ಬ್ಯಾಂಕ್ನ ಮುಖ್ಯ ಕಚೇರಿ ಎದುರು ಸಂಜೆ ಧರಣಿ ನಡೆಸಲಾಗುವುದು ಎಂದು ಹೇಳಿದೆ.
ಏಪ್ರಿಲ್ 1ರಿಂದ ಕಾರ್ಯಾರಂಭ:ಮೂರು ಬ್ಯಾಂಕ್ಗಳು ವಿಲೀನ ಗೊಂಡು ಹೊಸ ಬ್ಯಾಂಕ್ ರಚನೆಯಾಗಲಿದೆ. 2019ರ ಏಪ್ರಿಲ್ 1 ರಿಂದ ಕಾರ್ಯಾರಂಭ ಮಾಡಲಿದೆ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.