ADVERTISEMENT

15 ದಿನದೊಳಗೆ ಮೃತಪಟ್ಟ ಗ್ರಾಹಕರ ಕ್ಲೇಮು ಇತ್ಯರ್ಥಪಡಿಸಿ; ಆರ್‌ಬಿಐ ಸೂಚನೆ

ಪಿಟಿಐ
Published 26 ಸೆಪ್ಟೆಂಬರ್ 2025, 16:13 IST
Last Updated 26 ಸೆಪ್ಟೆಂಬರ್ 2025, 16:13 IST
ಆರ್‌ಬಿಐ
ಆರ್‌ಬಿಐ   

ಮುಂಬೈ: ಮೃತಪಟ್ಟ ಗ್ರಾಹಕರ ಬ್ಯಾಂಕ್ ಖಾತೆಗಳು ಮತ್ತು ಲಾಕರ್‌ಗಳ ಮೇಲಿನ ಕ್ಲೇಮುಗಳನ್ನು 15 ದಿನದೊಳಗೆ ಇತ್ಯರ್ಥಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಪರಿಷ್ಕೃತ ಮಾನದಂಡಗಳನ್ನು ಹೊರಡಿಸಿದೆ.  ಕ್ಲೇಮ್‌ ಇತ್ಯರ್ಥ ವಿಳಂಬವಾದರೆ ನಾಮನಿರ್ದೇಶಿತರಿಗೆ ಪರಿಹಾರವನ್ನು ನಿಗದಿಪಡಿಸಿದೆ. 

ಈ ನಿರ್ದೇಶನಗಳು ಮೃತಪಟ್ಟ ಗ್ರಾಹಕರ ಠೇವಣಿ ಖಾತೆಗಳಲ್ಲಿನ ಕ್ಲೇಮುಗಳು, ಸುರಕ್ಷಿತ ಠೇವಣಿ, ಲಾಕರ್‌ನಲ್ಲಿರುವ ವಸ್ತುಗಳ ಇತ್ಯರ್ಥಕ್ಕೆ ಸಂಬಂಧಿಸಿವೆ ಎಂದು ತಿಳಿಸಿದೆ.

ಮೃತಪಟ್ಟ ಗ್ರಾಹಕರಿಗೆ ಸಂಬಂಧಿಸಿದಂತೆ ಕ್ಲೇಮುಗಳ ಇತ್ಯರ್ಥದಲ್ಲಿ ಬ್ಯಾಂಕುಗಳು ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಿದೆ. ಇದನ್ನು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಈ ಪರಿಷ್ಕೃತ ಸೂಚನೆಗಳು ಹೊಂದಿವೆ. ಇದು ಗ್ರಾಹಕ ಸೇವೆಯ ಗುಣಮಟ್ಟದಲ್ಲಿ ಸುಧಾರಣೆ ತರಲಿದೆ. ಈ ಪರಿಷ್ಕೃತ ಸೂಚನೆಗಳನ್ನು 2026ರ ಮಾರ್ಚ್‌ 31ರ ಒಳಗಾಗಿ ಸಾಧ್ಯವಾದಷ್ಟು ಬೇಗ ಜಾರಿಗೆ ತರಲಾಗುವುದು ಎಂದು ತಿಳಿಸಿದೆ.

ADVERTISEMENT

ಸೇಫ್‌ ಡಿಪಾಸಿಟ್‌ ಲಾಕರ್‌ಗೆ ಸಂಬಂಧಿಸಿದಂತೆ  ನಿಗದಿತ ಸಮಯದೊಳಗೆ ಕ್ಲೇಮ್‌ ಇತ್ಯರ್ಥವಾಗದಿದ್ದರೆ ಬ್ಯಾಂಕ್‌ಗಳು ಗ್ರಾಹಕರಿಗೆ ಪ್ರತಿ ದಿನ ₹5 ಸಾವಿರದಂತೆ ಪರಿಹಾರ ನೀಡಬೇಕು ಎಂದು ಆರ್‌ಬಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.