ADVERTISEMENT

ಹೊರಗುತ್ತಿಗೆ ವ್ಯವಸ್ಥೆ ಮೂಲಕ ಸಾಲ ವಸೂಲು ಮಾಡದಂತೆ ಮಹೀಂದ್ರಾ ಫಿನಾನ್ಸ್‌ಗೆ ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2022, 16:03 IST
Last Updated 22 ಸೆಪ್ಟೆಂಬರ್ 2022, 16:03 IST
   

ನವದೆಹಲಿ: ಹೊರಗುತ್ತಿಗೆ ವ್ಯವಸ್ಥೆಗಳ ಮೂಲಕ ಮಾಡಲಾಗುತ್ತಿರುವ ಸಾಲ ವಸೂಲಾತಿ ಮತ್ತು ಸ್ವಾಧೀನ ಪಡೆಸಿಕೊಳ್ಳುವ ಚಟುವಟಿಕೆಯನ್ನು ತಕ್ಷಣವೇ ನಿಲ್ಲಿಸುವಂತೆ ‘ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಫೈನಾನ್ಷಿಯಲ್ ಸರ್ವಿಸಸ್‌’ಗೆ ಆರ್‌ಬಿಐ ಗುರುವಾರ ನಿರ್ದೇಶನ ನೀಡಿದೆ.

ಆದರೆ, ಕಂಪನಿಯು ತನ್ನ ಸ್ವಂತ ಉದ್ಯೋಗಿಗಳ ಮೂಲಕ ಸಾಲ ವಸೂಲಾತಿ ಮತ್ತು ಸ್ವಾಧೀನ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ತಿಳಿಸಲಾಗಿದೆ.

ಜಾರ್ಖಂಡ್‌ನಲ್ಲಿ ಸಾಲ ವಸೂಲಾತಿ ಏಜೆಂಟರು ಇತ್ತೀಚೆಗೆ ಗರ್ಭಿಣಿ ಮಹಿಳೆಯೊಬ್ಬರನ್ನು ಟ್ರ್ಯಾಕ್ಟರ್‌ ಹರಿಸಿ ಕೊಂದ ಘಟನೆಯ ಹಿನ್ನೆಲೆಯಲ್ಲೇ ಈ ನಿರ್ದೇಶನ ಬಂದಿದೆ. ಹೀಗಾಗಿ ಈ ಬೆಳವಣಿಗೆಯು ಪ್ರಾಮುಖ್ಯತೆ ಪಡೆದಿದೆ.

ADVERTISEMENT

ಆರ್‌ಬಿಐ ಕಾಯ್ದೆಯ ಸೆಕ್ಷನ್ 45L(1)(ಬಿ) ಅಡಿಯಲ್ಲಿನ ತನ್ನ ಅಧಿಕಾರ ಬಳಸಿ ಆರ್‌ಬಿಐ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.