ನವದೆಹಲಿ: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲೆಯ ₹ 294 ಕೋಟಿ ಲಾಭ ಗಳಿಸಿದೆ. ಸಾಲ ವಿತರಣೆ ಹೆಚ್ಚಾಗಿದ್ದು ಹಾಗೂ ವಸೂಲಾಗದ ಸಾಲ (ಎನ್ಪಿಎ) ಪ್ರಮಾಣ ತಗ್ಗಿದ್ದು ಲಾಭ ಏರಿಕೆಗೆ ಕಾರಣ ಎಂದು ಬ್ಯಾಂಕ್ ತಿಳಿಸಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ ₹ 274 ಕೋಟಿ ನಷ್ಟ ಕಂಡಿತ್ತು. ಈ ವರ್ಷದ ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭವು ಶೇ 45ರಷ್ಟು ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಬ್ಯಾಂಕ್ನ ಒಟ್ಟು ಎನ್ಪಿಎ ಪ್ರಮಾಣವು ₹ 929 ಕೋಟಿಗೆ ಇಳಿಕೆಯಾಗಿದೆ. ಇದು ಹಿಂದಿನ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದ ಹೊತ್ತಿನಲ್ಲಿ ₹ 1,713 ಕೋಟಿ ಆಗಿತ್ತು. ನಿವ್ವಳ ಎನ್ಪಿಎ ಪ್ರಮಾಣವು ಶೇ 0.04ಕ್ಕೆ ಇಳಿಕೆಯಾಗಿದೆ. ವಸೂಲಾಗದ ಸಾಲದ ಪೈಕಿ ₹ 157 ಕೋಟಿ ಮೊತ್ತದ ಸಾಲವನ್ನು ರೈಟ್ ಆಫ್ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.