ಭಾದ್ರಪದ ಮಾಸದ ಆರಂಭದೊಂದಿಗೆ, 26.8. 2025 ರಂದು ಮಂಗಳವಾರ, ಗೌರಿ ಹಬ್ಬವು ಬರುತ್ತದೆ. ಈ ಹಬ್ಬವು ಮಳೆಯಿಂದ ನೆನೆದ ಧರೆಯು ಬಸಿರಾಗಿ ಹಸಿರು ಬೆಳೆಯನ್ನು ಹೊರ ತರುತ್ತದೆ ಎಂಬುವುದು ಗೌರಿ ಮಾತೆಯ ಪ್ರಕೃತಿ ಸಂಕೇತ. ಈ ಕಾರಣದಿಂದ ಗೌರಿ ದೇವಿಗೆ ಹಸಿರು ಸೀರೆಯನ್ನುಡಿಸಿ ಸಂತಾನದಾತೆ ಎಂದು ಪೂಜಿಸುತ್ತಾರೆ.
ಪುರಾಣ ಕಥೆಗಳ ಪ್ರಕಾರ ಗೌರಿಯ ಸುಬ್ರಹ್ಮಣ್ಯ ಮತ್ತು ಗಣಪತಿ ಪುತ್ರರು. ಗಣಪತಿಯನ್ನು ಶಿವನಗಣಗಳ ನಾಯಕ ಎಂದು ಕರೆಯುತ್ತಾರೆ.
ಸ್ವರ್ಣ ಗೌರಿ ಪೂಜೆ :– (ಆ. 25) ಮಂಗಳವಾರ ತದಿಗೆ ತಿಥಿ ಪ್ರಾರಂಭ ಆಗಿ, ಸೋಮವಾರ ಘಟಿಕಾ:12:42 (ಹಗಲು) ರಿಂದ ಬೆಳಿಗ್ಗೆ 11:19), ಘಟಿಕಾ:15:1 (ಹಗಲು 12:15ರವರೆಗೆ ) ಆ. 26ಕ್ಕೆ ತಿಥಿ ಮುಕ್ತಾಯವಾಗುತ್ತದೆ.
ಗೌರಿ ಹಬ್ಬದ ಪೂಜಾ ಮಹೂರ್ತ: ಬೆಳಿಗ್ಗೆ 06.08 ರಿಂದ 08.37 ರವರೆಗೆ ಇರುತ್ತದೆ. ಈ ಸಮಯದಲ್ಲಿ ಗೌರಿ ಪೂಜೆ ಮಾಡುವವರು ಬಾಗಿನ ನೀಡಿದರೇ ಒಳಿತು ಆಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.