ADVERTISEMENT

ಕಾರು ಬಿಟ್ಟು ಟಾಂಗಾ ಏರಿದ ಡಿ.ಸಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 15:32 IST
Last Updated 8 ಜೂನ್ 2019, 15:32 IST
ಬಾಗಲಕೋಟೆಯಿಂದ ನವನಗರಕ್ಕೆ ಶನಿವಾರ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಟಾಂಗಾ ಗಾಡಿಯಲ್ಲಿ ಪ್ರಯಾಣಿಸಿದರು
ಬಾಗಲಕೋಟೆಯಿಂದ ನವನಗರಕ್ಕೆ ಶನಿವಾರ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಟಾಂಗಾ ಗಾಡಿಯಲ್ಲಿ ಪ್ರಯಾಣಿಸಿದರು   

ಬಾಗಲಕೋಟೆ: ಎಫ್‌ಡಿಎ ಹಾಗೂ ಎಸ್‌ಡಿಎ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ಪರಿವೀಕ್ಷಣೆಗೆ ಶನಿವಾರ ಮುಂಜಾನೆ ಬಾಗಲಕೋಟೆಯ ಬಿ.ವಿ.ವಿ ಸಂಘದ ಬಸವೇಶ್ವರ ಕಾಲೇಜಿಗೆ ತೆರಳಿದ್ದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಅಲ್ಲಿಂದ ವಾಪಸ್ ಮರಳುವಾಗ ಕಾರು ಬಿಟ್ಟು ಟಾಂಗಾ ಏರಿದರು.

‘ಇನ್ನೊಂದು 10 ವರ್ಷಗಳಲ್ಲಿ ಟಾಂಗಾ ಗಾಡಿಗಳು ಸಂಪೂರ್ಣ ಕಣ್ಮರೆಯಾಗಲಿವೆ. ಹುಡುಕಿದರೂ ಸಿಗುವುದಿಲ್ಲ. ಆ ಅನುಭೂತಿ ಪಡೆಯಲು ಮತ್ತೆ ಅವಕಾಶವಾಗುವುದಿಲ್ಲ. ಹಾಗಾಗಿ ಟಾಂಗಾ ಏರಿದ್ದೇನೆ’ ಎಂದು ರಾಮಚಂದ್ರನ್ ತಿಳಿಸಿದರು.

ಬಾಗಲಕೋಟೆಯಿಂದ ನವನಗರದ ಕಚೇರಿಗೆ ಟಾಂಗಾ ಗಾಡಿಯಲ್ಲಿಯೇ ಬಂದರು. ಜಿಲ್ಲಾಧಿಕಾರಿ ಟಾಂಗಾದಲ್ಲಿ ಹೋಗುತ್ತಿರುವುದನ್ನು ರಸ್ತೆಯಲ್ಲಿ ಓಡಾಡುವವರು ಅಚ್ಚರಿಯಿಂದಲೇ ನೋಡಿದರು. ಕೆಲವರು ಅವರತ್ತ ಕೈ ಬೀಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.