ಬಾದಾಮಿ: ಇಲ್ಲಿನ ಕಾಳಿದಾಸ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬಿ.ಬಿ. ಚಿಮ್ಮನಕಟ್ಟಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ವೈ. ಕೊನೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ಎಸ್.ಕೆ. ಬೆಳವಲದ ತಿಳಿಸಿದ್ದಾರೆ.
ಕಾಳಿದಾಸ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ ಈಚೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯ ಚುನಾವಣೆ ನಡೆಯಿತು.
ನಿರ್ದೇಶಕ ಮಂಡಳಿಗೆ ಭೀಮಸೇನ ಚಿಮ್ಮನಕಟ್ಟಿ, ಮಲ್ಲಪ್ಪ ಹೂಗಾರ, ಸಣ್ಣಬೀರಪ್ಪ ಪೂಜಾರ, ಮಹಾಗುಂಡಪ್ಪ ಚಲವಾದಿ, ನೀಲಪ್ಪ ಶಿವಪೂರ, ಭರಮಪ್ಪ ಕರಡಿಗುಡ್ಡ, ನಿಂಗಪ್ಪ ಕುರಿ, ರತ್ನಾಬಾಯಿ ಚಿಮ್ಮನಕಟ್ಟಿ, ಯಲ್ಲವ್ವ ಕರಿಗೌಡರ, ಶೇಕವ್ವ ಹರಣಶಿಕಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅವರು ಪ್ರತಿಭಟನೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.