ADVERTISEMENT

ಕಲಾದಗಿ | ಬೆಂಕಿ; ಹೊತ್ತಿ ಉರಿದ ಕಾರು

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 15:42 IST
Last Updated 1 ಜೂನ್ 2024, 15:42 IST
ಕಲಾದಗಿ ಸಮೀಪದ ದೇವನಾಳ ಪುನರ್ವಸತಿ ಕೇಂದ್ರದ ಬಳಿ ಕಾರೊಂದು ಬೆಂಕಿಗೆ ಆಹುತಿಯಾಗಿರುವುದು
ಕಲಾದಗಿ ಸಮೀಪದ ದೇವನಾಳ ಪುನರ್ವಸತಿ ಕೇಂದ್ರದ ಬಳಿ ಕಾರೊಂದು ಬೆಂಕಿಗೆ ಆಹುತಿಯಾಗಿರುವುದು   

ಕಲಾದಗಿ: ಸಮೀಪದ ದೇವನಾಳ ಪುನರ್ವಸತಿ ಕೇಂದ್ರದ ಬಳಿ ಶುಕ್ರವಾರ ರಾತ್ರಿ ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಕಲಾದಗಿಯ ಕೆ.ಆರ್. ಶಿಲ್ಪಿ ಅವರು ಸೇರಿದಂತೆ ನಾಲ್ವರು ಬಾಗಲಕೋಟೆಯಿಂದ ಗ್ರಾಮಕ್ಕೆ ಬರುತ್ತಿದ್ದಾಗ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಅವರು ಕಾರು ನಿಲ್ಲಿಸಿ, ಕೆಳಗಿಳಿದರು. ಬೆಂಕಿ ಇಡೀ ಕಾರು ಆವರಿಸಿಕೊಂಡಿತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು, ಬೆಂಕಿ ನಂದಿಸಿದರು. ಪಿಎಸ್ಐ ವಿಠ್ಠಲ ಹಾವನ್ನವರ ಭೇಟಿ ನೀಡಿ, ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT